ಜಮೀರ್ ಅಹ್ಮದ್ ಖಾನ್ ತಿನ್ನುತ್ತಿರುವುದು ಜೆಡಿಎಸ್‌ನ ಅನ್ನ: ರೇವಣ್ಣ

ಸೋಮವಾರ, 9 ಅಕ್ಟೋಬರ್ 2017 (16:53 IST)
ಉಚ್ಚಾಟಿತ ಶಾಸಕ ಜಮೀರ್ ಅಹ್ಮದ್ ಖಾನ್ ತಿನ್ನುತ್ತಿರುವುದು ಜೆಡಿಎಸ್‌ನ ಅನ್ನ ಎನ್ನುವುದು ಮರೆಯಬಾರದು ಎಂದು ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ನಾನು ನನ್ನ ಹುಟ್ಟೂರಿನಲ್ಲಿಯೇ ಸ್ಪರ್ಧಿಸುತ್ತೇನೆ. ಜಮೀರ್ ಅಹ್ಮದ್‌ಗೆ ತಾಕತ್ತಿದ್ರೆ ಅವರ ಹುಟ್ಟುರಾದ ಕುಣಿಗಲ್‌ನಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲ್ ಹಾಕಿದರು.
 
ನನ್ನ ವಿರುದ್ಧ ಜಮೀರ್  ಮೀಟ್ರು ತೋರಿಸುವುದು ಬೇಡ. ಕಾಂಗ್ರೆಸ್‌ಗೆ ಮೀಟ್ರು ಕಡೆಮೆಯಾಗಿದೆ ಅಲ್ಲಿ ತೋರಿಸಲಿ. ಕುಮಾರಸ್ವಾಮಿಗೆ ಟೋಪಿ ಹಾಕಿದವರೇ ಇವರು ಎಂದು ಕಿಡಿಕಾರಿದರು.
 
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾದರೇ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದಾಗಲೇ ರಾಜೀನಾಮೆ ನೀಡಬೇಕಾಗಿತ್ತು. ಅದನ್ನು ಬಿಟ್ಟು ಕೇವಲ ಟೀಕೆಗಳನ್ನು ಮಾಡುವುದರಿಂದ ಯಾವುದೇ ಲಾಭವಾಗದು ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಗುಡುಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ