ಸಂಜೆ ಸುರಿಧ ದಿಢೀರ್ ಮಳೆಗೆ ಬೆಂಗಳೂರಿನ ಗರುಡಾಮಾಲ್ ಜಂಕ್ಷನ್ ಜಲಾವೃತ

ಸೋಮವಾರ, 10 ಅಕ್ಟೋಬರ್ 2022 (20:58 IST)
ಸಂಜೆ ಏಳುಗಂಟೆಗೆ ಸುರಿದ ದಿಢೀರ್ ಮಳೆಗೆ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆ ಸಮೀಪದ 
ಗರುಡಾಮಾಲ್ ಜಂಕ್ಷನ್ ಸಂಪೂರ್ಣ ಜಲಾವೃತವಾಗಿತ್ತು. ಎಂ.ಜಿ.ರಸ್ತೆ ಕಡೆಯಿಂದ ಶಾಂತಿನಗರ, ಶೋಲೆ ಸರ್ಕಲ್, ಹಳೆ ಮದ್ರಾಸ್ ರಸ್ತೆ, ಹಾಸ್ಮಟ್ ಆಸ್ಪತ್ರೆ ರಸ್ತೆ, ರಾಜ್ಯ ಪುಟ್ಬಾಲ್ ಮೈದಾನ ರಸ್ತೆಗಳ ಸಂಪರ್ಕಕೊಂಡಿ ಅರ್ದಗಂಟೆ ಕಾಲ ಜಾಮ್ ಆಗಿತ್ತು.
 
ಗರುಡಾಮಾಲ್ ಗೆ ಬಂದ ಜನ , ನಾಲ್ಕು ರಸ್ತೆಗಳ ಜಂಕ್ಷನ್ ನಲ್ಲಿ ಸಿಲುಕಿ ಪರದಾಡಿದರು. ಇಳಿಜಾರು ರಸ್ತೆಲಿ ಒಂದು, ಒಂದೂವರೆ ಅಡಿ ನೀರು ನಿಂತ ಕಾರಣ ಬೈಕ್, ಆಟೋ, ಕಾರ್, ಕುದುರೆ ಜಟಕಾ ಗಾಡಿ ಸೇರಿದಂತೆ ಜನತೆ ತೀವ್ರವಾಗಿ ಪರದಾಡಿದರು. ಮಳೆ‌ನೀರು ರಾಜಕಾಲುವೆಯಲ್ಲಿ ಹರಿಯದೇ ರಸ್ತೆ ಮೇಲೆ ಹರಿಯುತ್ತಿರುವುದೇ ಅವಾಂತರಕ್ಕೆ ಆಸ್ಪದವಾಗಿದೆ. ರಾಜಕಾಲುವೆಯಲ್ಲಿನ ಮಣ್ಣು, ಕಸಕಡ್ಡಿ, ಹೂಳು ತುಂಬಿಕೊಂಡಿರುವುದು ಮುಂದಾಲೋಚನೆ ಇಲ್ಲದ ಬಿಬಿಎಂಪಿ ಕೆಲಸಕ್ಕೆ ಹಿಡಿದ ಕನ್ನಡಿಯಂತಿದೆ. 
 
ವಾಹನ ಸವಾರರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಲೇ ಸಂಚರಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ