ಹಲ್ಲೆ ಆರೋಪ: ಚೈತ್ರಾ ಕುಂದಾಪುರ ಗ್ಯಾಂಗ್‌ನ ಪ್ರಮುಖನ ಮೇಲೆ ಮತ್ತೊಂದು ದೂರು

Sampriya

ಬುಧವಾರ, 27 ಮಾರ್ಚ್ 2024 (19:48 IST)
ಚಿಕ್ಕಮಗಳೂರು: ಚೈತ್ರಾ ಕುಂದಾಪುರ ಗ್ಯಾಂಗ್‌ನ ಪ್ರಮುಖ ಆರೋಪಿ ಮೇಲೆ ಮತ್ತೊಂದು ದೂರು ದಾಖಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಧನರಾಜ್  ವಿರುದ್ದ ಸಲೂನ್ ಮಾಲೀಕನ ಹಲ್ಲೆ ಆರೋಪ ಮಾಡಿ, ಠಾಣೆಗೆ ದೂರು ನೀಡಿದ್ದಾನೆ.

ಚಿಕ್ಕಮಗಳೂರಿನ ಕಡೂರಿನಲ್ಲಿ ಸಲೂನ್ ನಡೆಸುತ್ತಿದ್ದ ರಾಮು ಎಂಬಾತನ ಮೇಲೆ ಧನರಾಜ್ ಹಲ್ಲೆ ನಡೆಸಿದ್ದಾನೆ.  ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಂಬಂಧ ಆತನ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಸಲೂನ್ ಮಾಲೀಕ ರಾಮು ವಂಚನೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು, ಕಳೆದ ತಿಂಗಳು ಜೈಲಿನಿಂದ ಹೊರಬಂದಿರುವ ಧನರಾಜ್ ಗೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು.

ಸೋಮವಾರ ಕಡೂರಿನ ಹೋಟೆಲ್ ನಲ್ಲಿ ಹಲ್ಲೆ ನಡೆಸಿದ್ದು, ಹಲ್ಲೆ ಸಂಬಂಧ ಬೀರೂರು ಪೊಲೀಸರಿಗೆ ರಾಮು ದೂರು ನೀಡಿದ್ದಾರೆ. ಆದರೆ ಬೀರೂರು ಪೊಲೀಸರು ಪ್ರಕರಣ ದಾಖಲಿಸದ ಹಿನ್ನೆಲೆ ಚಿಕ್ಕಮಗಳೂರು ಎಸ್ಪಿಗೆ ಸಲೂನ್ ಮಾಲೀಕ ರಾಮು ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ