ನಿಖಿಲ್ ಗೆ ಅನುಭವ, ಅರ್ಹತೆ ಇಲ್ಲ ಎಂದ ನಟ
ಮಂಡ್ಯದಲ್ಲಿ ಸುಮಲತಾ ಎದುರು ಸಮರ್ಥ ಅಭ್ಯರ್ಥಿ ಯಾರಾದರೂ ಇದ್ದಿದ್ದರೆ ಅವರನ್ನು ಒಪ್ಪಬಹುದಿತ್ತು. ಸುಮಲತಾ ಮತ್ತು ನಿಖಿಲ್ ಇಬ್ಬರ ನಡುವೆ ಹೋಲಿಕೆ ಮಾಡಿದರೆ ಲೋಕಸಭೆಗೆ ಸುಮಲತಾ ನನ್ನ ಆಯ್ಕೆ. ಹೀಗಂತ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಚಿತ್ರನಟ ಹಾಗೂ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್, ನಿಖಿಲ್ ಗೆ ಅನುಭವ, ಅರ್ಹತೆ ಇಲ್ಲ ಎಂದರು. ನಿಖಿಲ್ ಯುವಕ, ಅಂದ್ರೆ ಇದು ರನ್ನಿಂಗ್ ರೇಸ್. ಕಾಂಪಿಟೇಶನ್ ಅಲ್ಲ. ಅರ್ಹತೆ ಅಂದರೆ ವಯಸ್ಸಲ್ಲ, ಅವರ ನಡೆ, ಮಾತು, ಅನುಭವ.
ಅರ್ಹತೆ ಇದ್ದರೆ ಕುಟುಂಬ ರಾಜಕಾರಣ ಆಗಲ್ಲ, ಅರ್ಹತೆ ಇಲ್ಲದಿದ್ದರೆ ಅದು ಕುಟುಂಬ ರಾಜಕಾರಣ ಆಗುತ್ತೆ ಎಂದರು. ಸುಮಲತಾಗೆ ರಾಜಕೀಯದ ಬಗ್ಗೆ ಗೊತ್ತಿದೆ, ಅವರು ಗೆಲ್ಲಬೇಕು ಎಂದು ಮಾಧ್ಯಮ ಸಂವಾದದಲ್ಲಿ ಪ್ರಕಾಶ್ ರೈ ಹೇಳಿಕೆ ನೀಡಿದ್ದಾರೆ.