ಮಾಯಾವತಿ ಪ್ರಚಾರದಿಂದ ಯಾರಿಗೆ ಲಾಭ ಆಗುತ್ತೆ ಅನ್ನೋದು ಗೊತ್ತಿಲ್ವಂತೆ!

ಬುಧವಾರ, 10 ಏಪ್ರಿಲ್ 2019 (18:28 IST)
ಮೈತ್ರಿ ಪಕ್ಷಗಳ ಗೊಂದಲ ಸದ್ಯಕ್ಕೆ ಬಗೆಹರಿಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೀಗಂತ ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ಮುಖಂಡ ವ್ಯಂಗ್ಯವಾಡಿದ್ದಾರೆ.

ಮೈಸೂರಿನಲ್ಲಿ ಮಾಜಿ ಸಿಎಂ ಎಸ್.ಎಂ‌.ಕೃಷ್ಣ ಹೇಳಿಕೆ ನೀಡಿದ್ದು, ಬಿಜೆಪಿ ಎಲ್ಲೆಲ್ಲಿ ಹೇಳುತ್ತದೆಯೋ ಅಲ್ಲಿಗೆ ಪ್ರಚಾರಕ್ಕೆ ಹೋಗುತ್ತೇನೆ ಎಂದರು.

ಇನ್ನು ಮಾಯಾವತಿ ಮೈಸೂರು ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾಯವತಿ ಒಬ್ಬರು ಪ್ರಭಾವಿ ರಾಜಕಾರಣಿ. ಅವರು ಈಗಾಗಲೇ ಕಾಂಗ್ರೆಸ್ ಜತೆ ಹೋಗಲ್ಲ ಅಂತ ಹೇಳಿದ್ದಾರೆ. ಮೈಸೂರಿನಲ್ಲಿ ಅವರು ಬರುವುದರಿಂದ ಪರಿಣಾಮ ಬೀರಬಹುದು. ಅದು ಯಾವ ಪಕ್ಷಕ್ಕೆ ಅಂತ ಗೊತ್ತಿಲ್ಲ. ಅದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗುತ್ತದೆ ಎಂದರು.

ಇನ್ನು ಮಂಡ್ಯದಲ್ಲಿ ಅಭ್ಯರ್ಥಿಗಳು ಗೆಲ್ಲುವುದು ಮತದಾರರನ್ನು ಅವಲಂಬಿಸಿದೆ. ಇಷ್ಟಾದರೂ ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆಗೆ ನಿಲ್ಲಿಸಿರುವುದು ಅವರ ವೈಯುಕ್ತಿಕ ವಿಚಾರ. ಇದರ ಬಗ್ಗೆ ನಾನು ಮಾತನಾಡಲ್ಲ ಅಂತ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ‌.ಕೃಷ್ಣ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ