ಚಾನ್ಸ್ ಕೊಟ್ಟರೆ ಎಲ್ಲರನ್ನೂ ನುಂಗಿ ಹಾಕ್ತೇವೆ ಎಂದ ಈಶ್ವರಪ್ಪ

ಶನಿವಾರ, 13 ಏಪ್ರಿಲ್ 2019 (17:44 IST)
ಮಾಜಿ ಡಿಸಿಎಂ ಈಶ್ವರಪ್ಪಗೆ ನಿಂಬೆ ಹಣ್ಣು ಕೊಡೋದಾಗಿ ರೇವಣ್ಣ ಹೇಳಿಕೆ ನೀಡಿರುವ ಬೆನ್ನಲ್ಲೇ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ನಿಂಬೆಹಣ್ಣು ಕೊಡೋದಾದ್ರೆ ಕೊಡಲಿ. ನಮ್ಮನೇಲಿ ನಾನ್ ವೆಜ್ ಚೆನ್ನಾಗಿ ಮಾಡ್ತಾರೆ. ಅದಕ್ಕೆ ಹಿಂಡ್ಕೋತೀನಿ. ನಿಂಬೆಹಣ್ಣು ಸಮೇತ ರೇವಣ್ಣನನ್ನೇ ನುಂಗಿಬಿಡ್ತೇನೆ. ಜೆಡಿಎಸ್ ನವರಿಗೆ ಬಿಜೆಪಿ ಬಗ್ಗೆ ಗೊತ್ತಿಲ್ಲ. ಚಾನ್ಸ್ ಕೊಟ್ಟರೆ ಎಲ್ಲರನ್ನೂ ನುಂಗಿ ಹಾಕ್ತೇವೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ಮತ್ತು ರೇವಣ್ಣಗೆ ಸುಳ್ಳು ಹೇಳಿ ಅಭ್ಯಾಸವಾಗಿದೆ. ಕಳೆದ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾದ್ರೆ ದೇಶ ಬಿಡೋದಾಗಿ ಹೇಳಿದ್ದರು. ಈಗ ಅವರ ಪುತ್ರ ರೇವಣ್ಣ ಕಾಂಗ್ರೆಸ್-ಜೆಡಿಎಸ್ 22 ಸ್ಥಾನ ಗೆಲ್ಲದಿದ್ದಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸೋದಾಗಿ ಹೇಳ್ತಾರೆ. ದೇವೇಗೌಡರು ದೇಶ ಬಿಟ್ಟರೇನ್ರೀ? ಅಂತ ಈಶ್ವರಪ್ಪ ಪ್ರಶ್ನೆ ಮಾಡಿದ್ರು.

ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನ ಖಚಿತ ಎಂದ ಅವರು, ಹಲವಾರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ. ಸಮ್ಮಿಶ್ರ ಸರ್ಕಾರ ನೆಗೆದು ಬೀಳೋದು ಖಚಿತ ಅಂತ ಕಲಬುರ್ಗಿಯಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ