‘ಭಾರತಕ್ಕೂ ನಾವು ಬೇಡ ಎಂದಾದರೆ ಕೊಂದು ಬಿಡಿ’

ಸೋಮವಾರ, 21 ಆಗಸ್ಟ್ 2017 (09:20 IST)
ನವದೆಹಲಿ: ಭಾರತಕ್ಕೂ ನಾವು ಬೇಡ ಎಂದಾದರೆ ನಮ್ಮನ್ನು ಕೊಂದು ಬಿಡಿ. ಆದರೆ ಈ ದೇಶದಿಂದ ಗಡೀಪಾರು ಮಾಡುವ ಕೆಲಸ ಮಾತ್ರ  ಮಾಡಬೇಡಿ’ ಹೀಗಂತ ಮ್ಯಾನ್ಮಾರ್ ನಿಂದ ಭಾರತಕ್ಕೆ ವಲಸೆ ಬಂದಿರುವ ರೋಹಿಂಗ್ಯಾ ಮುಸ್ಲಿಮರು ಅಳಲು ತೋಡಿಕೊಂಡಿದ್ದಾರೆ.

 
ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಗಡೀಪಾರು ಮಾಡುವಂತೆ ಕೇಂದ್ರ  ಸರ್ಕಾರ ಆದೇಶಿಸಿದ ಬೆನ್ನಲ್ಲೇ ಮ್ಯಾನ್ಮಾರ್ ನಿಂದ ಭಾರತಕ್ಕೆ ವಲಸೆ ಬಂದು ಇಲ್ಲಿ ನೆಲೆಸಿರುವ ರೋಹಿಂಗ್ಯಾ ಮುಸ್ಲಿಂ ಕುಟುಂಬಗಳು ಆತಂಕಕ್ಕೊಳಗಾಗಿವೆ.

‘ನಮ್ಮ ದೇಶದಲ್ಲಿ ಸದಾ ಹಿಂಸೆ, ಸಂಘರ್ಷ ನೋಡಿ ಸಾಕಾಗಿದೆ. ಭಾರತ ನಮಗೆ ಸ್ವರ್ಗವಿದ್ದಂತೆ. ದಯವಿಟ್ಟು ಇಲ್ಲಿಂದ ಮತ್ತೆ ಅಲ್ಲಿಗೆ ಗಡೀಪಾರು ಮಾಡಬೇಡಿ. ಹಾಗೇನಾದರೂ ಮಾಡುವುದಿದ್ದರೆ ನದಿಗೋ, ಸಮುದ್ರಕ್ಕೋ ಎಸೆದು ಬಿಡಿ’ ಎಂದು ಮುಸ್ಲಿಂ ಕುಟುಂಬಗಳು ಮನವಿ ಮಾಡಿವೆ.

ಇದನ್ನೂ ಓದಿ.. ಈಗ ಮತದಾನ ನಡೆದರೂ ದಿಲ್ಲಿಗೆ ಮೋದಿ, ಬೆಂಗಳೂರಿಗೆ ಸಿದ್ರಾಮಯ್ಯನೇ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ