ಪಟಾಕಿ ಗೋದಾಮಿನಲ್ಲಿ ಬೆಂಕಿ: ಇಬ್ಬರು ಬಾಲಕರು ಸಾವು

ಸೋಮವಾರ, 31 ಜುಲೈ 2017 (11:15 IST)
ತಿರುಪತಿ: ಪಟಾಕಿ ಗೋಡೌನ್ ಗೆ ಬೆಂಕಿ ಬಿದ್ದಪರಿಣಾಮ ಇಬ್ಬರು ಬಾಲಕರು ದಾರುಣವಾಗಿ ಮೃತಪಟ್ಟಿರುವ ಘಟನೆ ತಿರುಪತಿಯ ರೇಣುಗುಂಟ ರಸ್ತೆಯಲ್ಲಿ ನಡೆದಿದೆ.
 
ಮೃತ ಬಾಲಕರು ಮಂಜು(14), ಮಣಿ(10) ಎಂದು ತಿಳಿದು ಬಂದಿದೆ.  ರಘ ಅಲಿಯಾಸ್‌ ಖಲ್‌ನಾಯಕ್‌ ಎಂಬುವವರಿಗೆ ಸೇರಿದ ಗೋದಾಮ್‌  ಇದಾಗಿದ್ದು ,  ಗೋದಾಮ್‌ನ ಮೋಟಾರ್‌ ಸ್ವೀಚ್‌ ಆಫ್ ಮಾಡಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
 
ಸ್ಥಳಕ್ಕೆ ಆಗಮಿಸಿರುವ ಆಗ್ನಿಶಾಮಕ ದಳದ ಸಿಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಲಿಪಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ