ಕೃಷ್ಣಾಷ್ಟಮಿ ನೆಪದಲ್ಲಿ ಮೂರು ವರ್ಷದ ಮಗುವನ್ನು ನೇತು ಹಾಕಿದರು!

ಶುಕ್ರವಾರ, 15 ಸೆಪ್ಟಂಬರ್ 2017 (10:00 IST)
ಕೊಚ್ಚಿ: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಮ್ಮಲ್ಲಿ ಚಿಕ್ಕ ಮಕ್ಕಳಿಗೆ ಕೃಷ್ಣ ಅಥವಾ ರಾಧೆಯ  ಉಡುಪು ಧರಿಸಿ ಸಂಭ್ರಮಾಚರಿಸುವುದು ಸಾಮಾನ್ಯ. ಆದರೆ ಕೇರಳದ ಪಯ್ಯನ್ನೂರಿನಲ್ಲಿ ಮೂರು ವರ್ಷದ ಮಗುವನ್ನು ಎಲೆಯ ಮೇಲೆ ಬಿಸಿಲಲ್ಲಿ ನೇತಾಡಿಸಿ ಸಂಭ್ರಮಾಚರಿಸಿರುವುದು ವಿವಾದಕ್ಕೆಡೆಯಾಗಿದೆ.


ಮೂರು ವರ್ಷದ ಮಗುವಿಗೆ ಕೃಷ್ಣನ ವೇಷ ಹಾಕಿ ಬೃಹತ್ ಎಲೆಯ ಕಟೌಟ್ ನ ಮೇಲೆ ಕಟ್ಟಿ ಹಾಕಿ ಬಿಸಿಲಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಿಲ್ಲಿಸಲಾಗಿದೆ. ಇದೀಗ ಮಕ್ಕಳ ಹಕ್ಕುಗಳ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ.

ಅದೂ ಚಲಿಸುತ್ತಿರುವ ವಾಹನದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಮಗುವನ್ನು ಮೆರವಣಿಗೆ ಮಾಡಲಾಗಿದೆ.  ಈ ಫೋಟೋವನ್ನು ವ್ಯಕ್ತಿಯೊಬ್ಬರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ.. ಭಾರತ-ಜಪಾನ್ ಒಂದಾಗಿರುವುದನ್ನು ನೋಡಿ ಹೊಟ್ಟೆ ಉರಿದುಕೊಂಡ ಚೀನಾ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ