ನಾಲ್ವರು ಕಾಮುಕರು ಸೇರಿಕೊಂಡು ಸನ್ಯಾಸಿನಿಯ ಶೀಲ ಕೆಡಿಸಿದರು!

ಬುಧವಾರ, 9 ಸೆಪ್ಟಂಬರ್ 2020 (12:43 IST)
ರಾಂಚಿ: ನಾಲ್ವರು ಕಾಮುಕರ ಗ್ಯಾಂಗ್ ಒಂದು ಸಾಧ್ವಿ ಮಹಿಳೆಯೊಬ್ಬಳ ಮೇಲೆ ಮಾನಭಂಗ ಮಾಡಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.


ಈ ಪೈಕಿ ಮೂವರನ್ನು ಬಂಧಿಸಲಾಗಿದೆ. ಆಶ್ರಮಕ್ಕೆ ನುಗ್ಗಿದ ಕಾಮುಕರು ಇತರ ಸಾಧುಗಳನ್ನು ಬಲವಂತವಾಗಿ ಕೊಠಡಿಯಲ್ಲಿ ಕೂಡಿ ಹಾಕಿ ಸಾಧ‍್ವಿ ಮಹಿಳೆಯನ್ನು ಬಲಾತ್ಕಾರ ಮಾಡಿದ್ದಾರೆ. ಅಲ್ಲದೆ ಆಕೆ ಪ್ರತಿಭಟಿಸಿದಾಗ ಹಲ್ಲೆ ನಡೆಸಿದ್ದಾರೆ. ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಸ್ಥಾಪಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ