ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಎರಡು ವರ್ಷಗಳ ಅವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ವಿಕಾಸ್ ಪರ್ವ ಕಾರ್ಯಕ್ರಮ ಆಯೋಜಿಸಿದ್ದು, ಕೇಂದ್ರ ಸರಕಾರ 45 ಸಚಿವರು ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅರುಣ್ ಜೇಟ್ಲಿ, ಉಪೇಂದ್ರ ಖುಶ್ವಾ ಮತ್ತು ಉಪಾಧ್ಯಕ್ಷ ಪ್ರಕಾಶ್ ಝಾ ಲಕ್ನೋ ನಗರಕ್ಕೆ ಭೇಟಿ ನೀಡಲಿದ್ದರೆ, ಜೆಡಿ ನಡಡ್ಾ, ಬಂಡಾರೂ ದತ್ತಾತ್ರೇಯ, ಬೀರೇಂದ್ರ ಸಿಂಗ್, ಉತ್ತರಾಖಂಡ್ನ ಮಾಜಿ ಮುಖ್ಯಮಂತ್ರಿ ರಮೇಶ್ ಪೊಕ್ರಿಯಾಲ್ ಮತ್ತು ಅನುರಾಗ್ ಠಾಕೂರ್ ಬರೇಲಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.