ಇದೊಂದು ಹೃದಯವಿದ್ರಾವಕ ಘಟನೆ. ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ, ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಬದಲಾಗಬೇಕಾಗಿದೆ, ಬಾಲ ಮನಸ್ಥಿತಿಯ ಮನಸ್ಸುಗಳ ಹದಗೆಡುತ್ತಿವೆ ಎಂಬುದೆಲ್ಲವನ್ನು ತೋರಿಸುತ್ತದೆ ಈ ಹೃದಯವಿದ್ರಾವಕ ಕಥೆ.
ರಾಜಸ್ಥಾನದ ಜೋಧ್ಪುರದ ಬಸ್ನಿ ಪ್ರದೇಶದ ನಿವಾಸಿಯಾದ ಕೂಲಿ ಕಾರ್ಮಿಕರ 7 ವರ್ಷದ ಮಗುವೊಂದು ಸ್ವಾತಂತ್ರ್ಯೋತ್ಸವದ ದಿನ ತನ್ನದೇ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾವು ಎಂದರೇನು ಎಂಬುದನ್ನರಿಯದ ಬಾಲಕಿ ಸಾವಿಗೆ ಶರಣಾಗಿದ್ದು ಕುಟುಂಬಸ್ಥರನ್ನು, ಸ್ಥಳೀಯರನ್ನಷ್ಟೇ ಅಲ್ಲದೇ ಪೊಲೀಸರನ್ನು ದಿಗ್ಭ್ರಮೆಗೊಳಗಾಗುವಂತೆ ಮಾಡಿತು.