ಗೌತಮ್ ಕೊಂದಿದ್ದು ದೆವ್ವವಲ್ಲ, ಕೌಟುಂಬಿಕ ಕಲಹ?

ಬುಧವಾರ, 13 ಜುಲೈ 2016 (06:44 IST)
'ಘೋಸ್ಟ್‌ ಬಸ್ಟರ್‌' ಎಂದೇ ಖ್ಯಾತಿ ಗಳಿಸಿದ್ದ ಟಿವಿ ಕಾರ್ಯಕ್ರಮಗಳ ನಿರೂಪಕ, ಅಧಿಸಾಮಾನ್ಯ ಸಂಶೋಧಕ ಗೌರವ್ ತಿವಾರಿ(31) ಅವರ ಸಾವಿಗೆ ಭೂತವಲ್ಲ. ಕೌಟುಂಬಿಕ ಕಲಹದಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ. 

ಪತಿ ಪತ್ನಿ ನಡುವೆ ಕೆಲ ಮನಸ್ತಾಪಗಳಿದ್ದವು. ಅದನ್ನು ಬಗೆಹರಿಸಲು ಕುಟುಂಬ ಪ್ರಯತ್ನ ಪಡುತ್ತಿತ್ತು. ಜತೆಗೆ ಆತನ ಅಧಿಸಾಮಾನ್ಯ ಸಂಶೋಧನೆ, ಅನಿಯಮಿತ ಕೆಲಸ, ಹೆಚ್ಚಿನ ಸಂಪಾದನೆ ಇಲ್ಲದಿರುವುದು ಕುಟುಂಬದವರಿಗೆ ಬೇಸರ ತರಿಸಿತ್ತು. ತಿವಾರಿ ಕತ್ತಿನ ಸುತ್ತಮುತ್ತ ಕಪ್ಪು ಗೆರೆ ಕಂಡು ಬಂದಿದ್ದು ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ
 
ರಾಷ್ಟ್ರ ರಾಜಧಾನಿಯ ದ್ವಾರಕಾದಲ್ಲಿ ವಾಸವಾಗಿದ್ದ ತಿವಾರಿ ಜುಲೈ 7 ರಂದು ತಮ್ಮ ನಿವಾಸದ ಸ್ನಾನದ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಕಳೆದ ಜನೇವರಿ ತಿಂಗಳಲ್ಲಿ ವಿವಾಹವಾಗಿದ್ದ ಅವರು ಪತ್ನಿ, ಅಪ್ಪ ಮತ್ತು ಅಮ್ಮನ ಜತೆಯಲ್ಲಿ ಫ್ಲಾಟ್‌ನಲ್ಲಿ ವಾಸವಾಗಿದ್ದರು.
 
ಜುಲೈ 7 ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಬಾತ್ ರೂಮ್‌ನಲ್ಲಿ ಏನೋ ಸದ್ದು ಕೇಳಿ ಓಡಿ ಬಂದ ಪೋಷಕರಿಗೆ ಗೌರವ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಾಣಿಸಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಿಲ್ಲ.
 
2009 ರಲ್ಲಿ ತಿವಾರಿ ಇಂಡಿಯನ್ ಪ್ಯಾರಾ ನಾರ್ಮಲ್ ಸೊಸೈಟಿ ಎಂಬ ಸಂಸ್ಥೆಯನ್ನು ಆರಂಭಿಸಿದ್ದರು. ಪವಾಡಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಗೌರವ್ ತಿವಾರಿ  ಈ ಸಂಸ್ಥೆಯ ಉದ್ದೇಶ ಉದ್ದೇಶವಾಗಿತ್ತು.
 
ತಮ್ಮ ಮಗನ ಸಾವಿನ ಕುರಿತು ಪ್ರತಿಕ್ರಿಯಿಸಿರುವ ತಂದೆ ಉದಯ್ ತಿವಾರಿ ಕೆಲ ದಿನಗಳಿಂದ ಋಣಾತ್ಮಕ ಶಕ್ತಿಗಳು ನನ್ನನ್ನು 
ಹಿಂಬಾಲಿಸುತ್ತಿವೆ ಎಂದು ನಮ್ಮ ಬಳಿ ಹೇಳಿಕೊಂಡಿದ್ದರು. ಆದರೆ ನಾವದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ