'ಘೋಸ್ಟ್ ಬಸ್ಟರ್' ಎಂದೇ ಖ್ಯಾತಿ ಗಳಿಸಿದ್ದ ಟಿವಿ ಕಾರ್ಯಕ್ರಮಗಳ ನಿರೂಪಕ, ಅಧಿಸಾಮಾನ್ಯ ಸಂಶೋಧಕ ಗೌರವ್ ತಿವಾರಿ(31) ಅವರ ಸಾವಿಗೆ ಭೂತವಲ್ಲ. ಕೌಟುಂಬಿಕ ಕಲಹದಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ.
ಪತಿ ಪತ್ನಿ ನಡುವೆ ಕೆಲ ಮನಸ್ತಾಪಗಳಿದ್ದವು. ಅದನ್ನು ಬಗೆಹರಿಸಲು ಕುಟುಂಬ ಪ್ರಯತ್ನ ಪಡುತ್ತಿತ್ತು. ಜತೆಗೆ ಆತನ ಅಧಿಸಾಮಾನ್ಯ ಸಂಶೋಧನೆ, ಅನಿಯಮಿತ ಕೆಲಸ, ಹೆಚ್ಚಿನ ಸಂಪಾದನೆ ಇಲ್ಲದಿರುವುದು ಕುಟುಂಬದವರಿಗೆ ಬೇಸರ ತರಿಸಿತ್ತು. ತಿವಾರಿ ಕತ್ತಿನ ಸುತ್ತಮುತ್ತ ಕಪ್ಪು ಗೆರೆ ಕಂಡು ಬಂದಿದ್ದು ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ
ರಾಷ್ಟ್ರ ರಾಜಧಾನಿಯ ದ್ವಾರಕಾದಲ್ಲಿ ವಾಸವಾಗಿದ್ದ ತಿವಾರಿ ಜುಲೈ 7 ರಂದು ತಮ್ಮ ನಿವಾಸದ ಸ್ನಾನದ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಕಳೆದ ಜನೇವರಿ ತಿಂಗಳಲ್ಲಿ ವಿವಾಹವಾಗಿದ್ದ ಅವರು ಪತ್ನಿ, ಅಪ್ಪ ಮತ್ತು ಅಮ್ಮನ ಜತೆಯಲ್ಲಿ ಫ್ಲಾಟ್ನಲ್ಲಿ ವಾಸವಾಗಿದ್ದರು.