ಅನೈತಿಕ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ

ಶನಿವಾರ, 4 ಜನವರಿ 2020 (06:39 IST)
ಭುವನೇಶ್ವರ್: ಅನೈತಿಕ ಸಂಬಂಧಕ್ಕಾಗಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹೊಡೆದು ಕೊಲೆ ಮಾಡಿ ಆತನ ಶವವನ್ನು ರಸ್ತೆಗೆ ಎಸೆದ ಘಟನೆ ಒಡಿಶಾದ ರಾಯಗಡದಲ್ಲಿ ನಡೆದಿದೆ.



ರಾಜ್ ಕುಮಾರ್ ಕೊಲೆಯಾದ ವ್ಯಕ್ತಿ, ನಿವೇದಿತಾ ಕೊಲೆ ಮಾಡಿದ ಪತ್ನಿ. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ನಿವೇದಿತಾ ಪತಿಗೆ ತಿಳಿಯದಂತೆ ಬೇರೋಬ್ಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಕಳೆದ ಎರಡು ದಿನಗಳ ಹಿಂದೆ ಆಕೆ ತನ್ನ ಪ್ರಿಯಕರನ ಜೊತೆ ಮಲಗಿದಾಗ ಪತಿ ಮನೆಗೆ ಬಂದಿದ್ದಾನೆ. ಪತ್ನಿಯ ಈ ದೃಶ್ಯ ಕಂಡು ಆಕೆಯೊಂದಿಗೆ ಜಗಳವಾಡಿದ್ದಾನೆ. ಕೋಪಗೊಂಡ ನಿವೇದಿತಾ ಪ್ರಿಯಕರನ ಸಹಾಯದಿಂದ ಪತಿಯ ತಲೆಗೆ ಹೊಡೆದು ಕೊಂದು ಆತನ ಶವವನ್ನು ರಸ್ತೆಯಲ್ಲಿ ಎಸೆದು ಬಂದಿದ್ದಾಳೆ.


ಅಲ್ಲದೇ ಪೊಲೀಸ್ ಠಾಣೆಯಲ್ಲಿ ಪತಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರುಮಾಡಿದಾಗ ಪತಿಯ ಮೃತದೇಹ ಸಿಕ್ಕಿದೆ. ಈ ಬಗ್ಗೆ ಪತ್ನಿಯ ಮೇಲೆ ಅನುಮಾನಗೊಂಡ ಪೊಲೀಸರು ಆಕೆಯನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯ್ಬಿಟ್ಟಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ