ಅರವಿಂದ್ ಕ್ರೇಜಿವಾಲ್ ವಿರುದ್ಧ ಗಂಭೀರ ಆರೋಪ ಮಾಡಿದ ಆಪ್ ಶಾಸಕ

ಸೋಮವಾರ, 20 ಜನವರಿ 2020 (07:05 IST)
ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಲ್ಲೇ ಇದೀಗ ದೆಹಲಿ ಸಿಎಂ ಅರವಿಂದ್ ಕ್ರೀಜಿವಾಲ್ ಟಿಕೆಟ್ ಗಾಗಿ ಹಣ ಡಿಮ್ಯಾಂಡ್ ಮಾಡಿದ ಆರೋಪ ಕೇಳಿ ಬಂದಿದೆ.



ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ದ್ವಾರಕ ಕ್ಷೇತ್ರದ ಟಿಕೆಟ್ ನ್ನು ವಿನಯ್ ಮಿಶ್ರಾ ಅವರಿಗೆ ನೀಡಲಾಗಿದೆ. ಇದರಿಂದ ಆಕ್ರೋಶಗೊಂಡ ದ್ವಾರಕ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆದರ್ಶ ಶಾಸ್ತ್ರಿ ಅರವಿಂದ್ ಕ್ರೀಜಿವಾಲ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.


ಶನಿವಾರ ಆಪ್ ಪಕ್ಷವನ್ನು ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾದ ಆದರ್ಶ ಶಾಸ್ತ್ರಿ , ಸಿಎಂ ಅರವಿಂದ್ ಕ್ರೀಜಿವಾಲ್ ಪ್ರತಿ ಟಿಕೆಟ್ ಗೆ 10-12 ಕೋಟಿ ಹಣ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ