ಭೂಕುಸಿತದ ಬೆನ್ನಲ್ಲೇ ವಯನಾಡಿನ ಜನತೆಯ ನಿದ್ದೆಗೆಡಿಸಿ ನಿಗೂಢ ಶಬ್ಧ, ಭೂಕಂಪದ ಭೀತಿಯಲ್ಲಿ ದೇವರನಾಡು
ಭೂಕಂಪ ಸಂಭವಿಸಿರುವ ಬಗ್ಗೆ ಯಾವುದೇ ನಿದರ್ಶನ ಆಥವಾ ಕುರುಹುಗಳು ಸಿಕ್ಕಿಲ್ಲ. ಆದರೆ, ಸ್ಥಳೀಯರು ಆತಂಕಕ್ಕೊಳಗಾಗಿದ್ದರಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೂ ಜುಲೈ 10ರಂದು ನಡೆದ ಎರಡು ಭೀಕರ ಭೂಕುಸಿತದಲ್ಲಿ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ, 300ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.