ವಾಜಪೇಯಿ ನಿಧನದ ಬಗ್ಗೆ ಏಮ್ಸ್ ನಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗದೇ ಗೊಂದಲ

ಗುರುವಾರ, 16 ಆಗಸ್ಟ್ 2018 (14:59 IST)
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹೊಂದಿದ್ದಾರೆಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದರೂ ಏಮ್ಸ್ ವೈದ್ಯರು ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡದೇ ಸಾವಿನ ಬಗ್ಗೆ ಗೊಂದಲ ಮೂಡಿಸಿದ್ದಾರೆ.

ಸ್ವತಃ ಗೃಹ ಸಚಿವರೇ ಹೇಳಿಕೆ ನೀಡಿದರೂ ಇನ್ನೂ ಏಮ್ಸ್ ವೈದ್ಯರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಏಮ್ಸ್ ನಲ್ಲಿ ಭದ್ರತಾ ದೃಷ್ಟಿಯಿಂದ ಎಲ್ಲಾ ಸಿಸಿಟಿವಿ ಕ್ಯಾಮರಾಗಳನ್ನೂ ಬಂದ್ ಮಾಡಲಾಗಿದೆ.

ವೈದ್ಯರು ಹೆಲ್ತ್  ಬುಲೆಟಿನ್ ಬಿಡುಗಡೆ ಮಾಡುತ್ತಾರೆ. ಅದಾದ ಬಳಿಕವಷ್ಟೇ ವಾಜಪೇಯಿ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತದೆ ಎನ್ನಲಾಗಿತ್ತು. ಆದರೆ ಆಸ್ಪತ್ರೆ ಹೆಲ್ತ್  ಬುಲೆಟಿನ್ ಕೊಡುವ ಮೊದಲೇ ಗೃಹಸಚಿವರು ನಿಧನದ ವಾರ್ತೆ ನೀಡಿದ್ದಾರೆ. ಹೀಗಾಗಿ ಏಮ್ಸ್ ಆಸ್ಪತ್ರೆಯ ಅಧಿಕೃತ ಹೇಳಿಕೆಗಾಗಿ ಎಲ್ಲರೂ ಕಾಯುವಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ