ವಾಜಪೇಯಿ ನಿಧನದ ಸುದ್ದಿ ಘೋಷಿಸಿದ ಗೃಹಸಚಿವ ರಾಜನಾಥ್ ಸಿಂಗ್

ಗುರುವಾರ, 16 ಆಗಸ್ಟ್ 2018 (14:49 IST)
ನವದೆಹಲಿ: ದೇಶ ಮೆಚ್ಚಿದ ರಾಜಕಾರಣಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಸುದ್ದಿಯನ್ನು ಗೃಹ ಸಚಿವ ರಾಜನಾಥ್ ಸಿಂಗ್ ಇದೀಗ ತಾನೇ ಖಚಿತಪಡಿಸಿದ್ದಾರೆ.
 

ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಬೆಳಿಗ್ಗೆಯಿಂದಲೇ ಆಸ್ಪತ್ರೆಯ ಸುತ್ತಮುತ್ತ, ನಿವಾಸದ ಸುತ್ತ ಮುತ್ತ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿತ್ತು. ಆದರೆ ಮಧ್ಯಾಹ್ನ ಪ್ರಧಾನಿ ಮೋದಿ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕವೇ ವಾಜಪೇಯಿ ನಿಧನದ ಸುದ್ದಿಯನ್ನು ಪ್ರಕಟಿಸಲಾಗಿದೆ. ಆದರೆ ಏಮ್ಸ್ ವೈದ್ಯರಿಂದ ಇದುವರೆಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

‘ಅವರ ಸಿದ್ಧಾಂತಗಳು, ಯೋಜನೆಗಳು ನಿಖರವಾಗಿತ್ತು. ಇನ್ನು ಮುಂದೆ ಅವರು ನಮ್ಮ ನಡುವೆ ಇರಲ್ಲ. ಅವರಿಗೆ ನನ್ನ ಶ್ರದ್ಧಾಂಜಲಿಗಳು’ ಎಂದು ಸುದ್ದಿಗಾರರಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದರು. ಇದರೊಂದಿಗೆ ದೇಶ ಬಹುದೊಡ್ಡ ರಾಜಕೀಯ ನಾಯಕನನ್ನು ಕಳೆದುಕೊಂಡಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ