ಕೇರಳದ ರಂಜಿತಾ ಸಾವಿನ ಅಪಹಾಸ್ಯ ಮಾಡಿದ ಉಪ ತಹಶೀಲ್ದಾರ್ ಸಸ್ಪೆಂಡ್

Krishnaveni K

ಶುಕ್ರವಾರ, 13 ಜೂನ್ 2025 (16:45 IST)
Photo Credit: X
ಕಾಸರಗೋಡು: ಅಹಮ್ಮದಾಬಾದ್ ನಲ್ಲಿ ಸಂಭವಿಸಿದ ಭೀಕರ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಕೇರಳ ಮೂಲದ ನರ್ಸ್ ರಂಜಿತಾ ಸಾವಿನ ಅಪಹಾಸ್ಯ ಮಾಡಿದ ಕಾಸರಗೋಡಿನ ವೆಳ್ಳರಿಕುಂಡ್ ಉಪ ತಹಶೀಲ್ದಾರ್ ನನ್ನು ಅಮಾನತು ಮಾಡಲಾಗಿದೆ.

ನಿನ್ನೆ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದವರ ಪೈಕಿ ರಂಜಿತಾ ಕೂಡಾ ಒಬ್ಬರು. ಲಂಡನ್ ನಲ್ಲಿ ವೃತ್ತಿಯಲ್ಲಿದ್ದ ರಂಜಿತಾಗೆ ಕೇರಳದಲ್ಲಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ಕೆಲಸದ ನಿಮಿತ್ತ ಲಂಡನ್ ನಿಂದ ಬಂದಿದ್ದ ರಂಜಿತಾ ಮಕ್ಕಳೊಂದಿಗೆ ಕಾಲ ಕಳೆದು ಲಂಡನ್ ನಲ್ಲಿ ಬಾಕಿಯಿದ್ದ ಕೆಲಸ ಪೂರ್ತಿ ಮಾಡಲು ಹೊರಟಿದ್ದರು.

ಆದರೆ ಇದೇ ವೇಳೆ ಅವರು ದುರಂತಕ್ಕೀಡಾಗಿದ್ದಾರೆ. ರಂಜಿತಾ ಸಾವಿನ ಬಗ್ಗೆ ಇಡೀ ಕೇರಳವೇ ದುಃಖ ವ್ಯಕ್ತಪಡಿಸಿದ್ದರೆ ವೆಳ್ಳರಿಕುಂಡ್ ಉಪ ತಹಶೀಲ್ದಾರ್ ಪವಿತ್ರನ್ ವ್ಯಂಗ್ಯ ಮಾಡಿ ಕಾಮೆಂಟ್ ಮಾಡಿದ್ದರು. ಆಕೆ ಇನ್ನೂ ಎತ್ತರಕ್ಕೆ ಹಾರಲಿ ಎಂದಿದ್ದರು.

ಅವರ ಈ ಕಾಮೆಂಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಲವರು ಆನ್ ಲೈನ್ ಮೂಲಕವೇ ಸಿಎಂ ಪಿಣರಾಯಿ ವಿಜಯನ್ ಗೆ ದೂರು ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಕಾಸರಗೋಡು ಜಿಲ್ಲಾಧಿಕಾರಿಗಳನ್ನು ಉಪ ತಹಶೀಲ್ದಾರ್ ಪವಿತ್ರನ್ ರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ