ನಮ್ಮವರ ಮೃತದೇಹ ಕೊಡಿ.. ಅಹಮದಾಬಾದ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಸಾಲು
ಮೊನ್ನೆಯಷ್ಟೇ ಏರ್ ಇಂಡಿಯಾ ವಿಮಾನ ಪತನವಾಗಿ ಅದರಲ್ಲಿ 241 ಜನ ಸೇರಿದಂತೆ 270 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ವಿಮಾನ ಪತನವಾದ ಬೆನ್ನಲ್ಲೇ ಭಾರೀ ಬೆಂಕಿ ಕಾಣಿಸಿಕೊಂಡಿದ್ದರಿಂದ ಮೃತದೇಹಗಳು ಸುಟ್ಟು ಕರಕಲಾಗಿವೆ. ಹೀಗಾಗಿ ಗುರುತು ಹಿಡಿಯಲೂ ಕಷ್ಟವಾಗಿದೆ.
ಈ ಕಾರಣಕ್ಕೆ ಡಿಎನ್ ಎ ಪರೀಕ್ಷೆ ಮಾಡಿ ಒಬ್ಬೊಬ್ಬರದ್ದೇ ಮೃತದೇಹಗಳನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತಿದೆ. ನಿನ್ನೆಯಷ್ಟೇ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹವನ್ನು ಡಿಎನ್ ಎ ಪರೀಕ್ಷೆ ನಡೆಸಿ ಗುರುತಿಸಲಾಗಿತ್ತು. ಶನಿವಾರ ಒಟ್ಟು 12 ಮೃತದೇಹಗಳನ್ನು ಕುಟುಂಬಸ್ಥರಿಗೆ ನೀಡಲಾಗಿತ್ತು. ನಿನ್ನೆಯೂ ಕೆಲವು ಮೃತದೇಹಗಳನ್ನು ಮಾತ್ರ ಗುರುತು ಪತ್ತೆ ಮಾಡಲಾಗಿದೆ. ಹೀಗಾಗಿ ಈಗಲೂ ಸಾಕಷ್ಟು ಜನರು ಅಹಮದಾಬಾದ್ ಆಸ್ಪತ್ರೆ ಮುಂದೆ ತಮ್ಮವರ ಮೃತದೇಹಕ್ಕಾಗಿ ಕಾಯುತ್ತಿದ್ದಾರೆ.