ಏರ್ ಇಂಡಿಯಾ ವಿಮಾನ ಹತ್ತಲ್ಲ ಎಂದ ಡೇವಿಡ್ ವಾರ್ನರ್: ನಾವೂ ಹೋಗಲ್ಲ ಎಂದ ನೆಟ್ಟಿಗರು
ಗುಜರಾತ್ ನಲ್ಲಿ ನಡೆದ ದುರಂತದ ಬಳಿಕ ಏರ್ ಇಂಡಿಯಾ ವಿಮಾನದ ಸುರಕ್ಷತೆ ಬಗ್ಗೆಯೇ ಪ್ರಯಾಣಿಕರಿಗೆ ಅನುಮಾನ ಶುರುವಾಗಿದೆ. ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ನಾನು ಇನ್ನು ಮುಂದೆ ಯಾವತ್ತೂ ಏರ್ ಇಂಡಿಯಾದಲ್ಲಿ ಪ್ರಯಾಣ ಬೆಳೆಸಲ್ಲ. ಏರ್ ಇಂಡಿಯಾ ಜೊತೆ ಇದೇ ನನ್ನ ಕೊನೆಯ ಸಂಭಾಷಣೆ ಎಂದಿದ್ದಾರೆ.
ಈ ಘಟನೆಯಲ್ಲಿ ಸಿಬ್ಬಂದಿಗಳಲ್ಲ ಇಡೀ ಏರ್ ಇಂಡಿಯಾ ಕಂಪನಿಯದ್ದೇ ತಪ್ಪು. ಆದರೆ ಕಂಪನಿ ಯಾವತ್ತೂ ಇದರ ಜವಾಬ್ಧಾರಿ ಹೊತ್ತುಕೊಳ್ಳಲ್ಲ ಎಂದು ಏರ್ ಇಂಡಿಯಾದ ಮಾಜಿ ನೌಕರರೊಬ್ಬರ ಕಾಮೆಂಟ್ ಟ್ಯಾಗ್ ಮಾಡಿ ವಾರ್ನರ್ ಇದೇ ಕೊನೆ ಇನ್ನು ಮುಂದೆ ಏರ್ ಇಂಡಿಯಾದಲ್ಲಿ ಪ್ರಯಾಣ ಮಾಡಲ್ಲ ಎಂದಿದ್ದಾರೆ.
ಇನ್ನು ಡೇವಿಡ್ ವಾರ್ನರ್ ರಂತೆ ಅನೇಕರು ಈಗ ನಾವೂ ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಿದ್ವಿ. ಇನ್ನೀಗ ನಮಗೆ ಈ ವಿಮಾನದಲ್ಲಿ ಪ್ರಯಾಣ ಮಾಡಲು ಭಯವಾಗುತ್ತದೆ. ನಮ್ಮ ಟಿಕೆಟ್ ಕ್ಯಾನ್ಸಲ್ ಮಾಡಿದ್ದೇವೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಇದು ಟ್ರೆಂಡ್ ಆದರೆ ಏರ್ ಇಂಡಿಯಾಗೆ ಸಂಕಷ್ಟ ತಂದೊಡ್ಡಲಿದೆ.