ಸಿಎಎ ವಿರೋಧಿಸುತ್ತಿರುವವರಿಗೆ ಈ ದಾಳಿ ತಕ್ಕ ಸೂಕ್ತ ಉತ್ತರ ಎಂದ ಅಮಿತ್ ಶಾ

ಸೋಮವಾರ, 6 ಜನವರಿ 2020 (06:47 IST)
ನವದೆಹಲಿ : ಸಿಎಎ ವಿರೋಧಿಸುತ್ತಿರುವವರಿಗೆ ಪಾಕಿಸ್ತಾನದಲ್ಲಿನ ಗುರುದ್ವಾರದ ನಂಕನಾ ಸಾಹಿಬ್ ದಾಳಿ ಉತ್ತರ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.



ದೆಹಲಿಯಲ್ಲಿ ನಡೆದ ಬಿಜೆಪಿ ಅಭಿಯಾನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಹಾಗೂ ಎಎಪಿ ಮುಖ್ಯಸ್ಥ ಅರವಿಂದ್ ಕ್ರೀಜಿವಾಲ್ ಅವರು ಸಿಎಎಯನ್ನು ವಿರೋಧಿಸುತ್ತಿದ್ದಾರೆ. ಅವರು ಪಾಕಿಸ್ತಾನದಲ್ಲಿನ ಗುರುದ್ವಾರದ ನಂಕಾನಾ ಸಾಹಿಬ್ ಮೇಲೆ ನಡೆದ ದಾಳಿಯನ್ನು ತಿಳಿಯಬೇಕು ಎಂದು ಹೇಳಿದ್ದಾರೆ.


ಅಲ್ಲದೇ ನಂಕಾನಾ ಸಾಹಿಬ್ ನಲ್ಲಿ ಏನಾಯಿತು? ಸಿಖ್ಖರ ಮೇಲೆ ದಾಳಿ ನಡೆಸಿದ ರೀತಿ ನೋಡಿ. ಈ ರೀತಿಯಾದಾಗ  ನಮ್ಮ ಸಿಖ್ ಸಹೋದರರು ಭಾರತವಿಲ್ಲದಿದ್ದರೆ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ