ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಅನಂತ್ ಕುಮಾರ್ ಹೆಗಡೆಗೆ ಸಂಕಷ್ಟ

ಮಂಗಳವಾರ, 4 ಫೆಬ್ರವರಿ 2020 (06:47 IST)
ನವದೆಹಲಿ : ಮಹಾತ್ಮ  ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ ಅನಂತ್ ಕುಮಾರ್ ಹೆಗಡೆ ಬಿಜೆಪಿಯಿಂದ ಶೋಕಾಸ್ ನೀಡಿದ್ದು, ಮಾತ್ರವಲ್ಲದೇ ಸಂಸದೀಯ ಸಭೆಗೆ ಬರದಂತೆ ನಿಷೇಧ ಹೇರಿದೆ.


ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ, ಬ್ರಿಟಿಷರ ಬೆಂಬಲದಿಂದ ನಡೆದ ಪೂರ್ವ ನಿಯೋಜಿತ ನಾಟಕದಲ್ಲಿ ಗಾಂಧಿ ಪಾತ್ರಧಾರಿಯಾಗಿದ್ದರು. ಬ್ರಿಟಿಷರ ಅನುಮತಿಯಿಂದ ಸತ್ಯಾಗ್ರಹ, ಹೋರಾಟದ ನಾಟಕ ಮಾಡುತ್ತಿದ್ದರು. ಇದು ನಿಜವಾದ ಸ್ವಾತಂತ್ರ್ಯ ಹೋರಾಟವಲ್ಲ, ಇದು ಅನುಕೂಲ ಸ್ವಾತಂತ್ರ್ಯ ಚಳುವಳಿ ಎಂದು ರಾಷ್ಟ್ರಪಿತ ಮಹತ್ಮಾ ಗಾಂಧೀಜಿಗೆ ಅವಹೇಳನ ಮಾಡಿದ್ದರು.


ಅವರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್ ಈ ಬಗ್ಗೆ ಮಾಧ್ಯಮಗಳ ಮುಂದೆ ಕ್ಷಮೆಯಾಚಿಸಲು ಸೂಚಿಸಿದ್ದಾರೆ. ಆದರೆ ಅನಂತ್ ಕುಮಾರ್ ಕ್ಷಮೆಯಾಚಿಸದ ಹಿನ್ನಲೆಯಲ್ಲಿ ಶೋಕಾಸ್ ನೀಡಿದ್ದು, ಸಂಸದೀಯ ಸಭೆಗೆ ಬರದಂತೆ ನಿಷೇಧ ಹೇರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ