ಆಧ್ಯಾತ್ಮಿಕ ಗುರು ಬಾಬಾ ರಾಮ್​ ರಹೀಮ್ ಗೆ ಎದುರಾಗಿದೆ ಮತ್ತೊಂದು ಸಂಕಷ್ಟ

ಶುಕ್ರವಾರ, 11 ಜನವರಿ 2019 (11:58 IST)
ಪಂಚಕುಲಾ : ಈಗಾಗಲೇ ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 20 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ದೇರಾ ಸಚ್ಚಾ ಸೌಧದ ಮುಖ್ಯಸ್ಥ, ಆಧ್ಯಾತ್ಮಿಕ ಗುರು ಬಾಬಾ ರಾಮ್​ ರಹೀಮ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.


ಸಿರ್ಸಾ ಮೂಲದ ಛತ್ರಪತಿ ರಾಮಚಂದ್ರ ಎಂಬ ಪತ್ರಕರ್ತನ ಹತ್ಯೆ ಆರೋಪ ರಾಮ್​ ರಹೀಂ ಬಾಬಾ ಮೇಲಿದ್ದು, ಇಂದು ಹರಿಯಾಣದ ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯವು ಈ ಪ್ರಕರಣದ ಬಗ್ಗೆ ತೀರ್ಪು ನೀಡಲಿದೆ. ಈ ಹಿನ್ನಲೆಯಲ್ಲಿ ಹರಿಯಾಣದ ಪಂಚಕುಲ ಸಿಬಿಐ ಕೋರ್ಟ್ ಸುತ್ತಮುತ್ತ ಭಾರೀ ಭದ್ರತೆ ಏರ್ಪಡಿಸಲಾಗಿದೆ.


ಛತ್ರಪತಿ ರಾಮಚಂದ್ರ ಎಂಬ ಪತ್ರಕರ್ತ ತಮ್ಮ ಆಶ್ರಮದ ಬಗ್ಗೆ ಲೇಖನ ಬರೆದಿದ್ದ ಕಾರಣಕ್ಕೆ ಸ್ವಯಂ ಘೋಷಿತ ದೇವಮಾನವ, ದೇರಾ ಸಚ್ಚಾ ಸೌಧದ ಮುಖ್ಯಸ್ಥ, ಆಧ್ಯಾತ್ಮಿಕ ಗುರು ಬಾಬಾ ರಾಮ್​ ರಹೀಮ್ ಆತನ ತಲೆಗೆ ಗುಂಡಿಟ್ಟು ಕೊಲೆ ಮಾಡಿದ ಆರೋಪ ಹೊತ್ತಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ