2 ಗ್ರೆನೇಡ್ ಸಾಗಿಸುತ್ತಿದ್ದ ಯೋಧನ ಬಂಧನ

ಸೋಮವಾರ, 3 ಏಪ್ರಿಲ್ 2017 (10:00 IST)

2 ಗ್ರೆನೇಡ್`ಗಳನ್ನ ಬ್ಯಾಗಿನಲ್ಲಿಟ್ಟುಕೊಂಡು ಸಾಗಿಸುತ್ತಿದ್ದ ಯೋಧನೊಬ್ಬನನ್ನ ಜಮ್ಮು ಕಾಶ್ಮೀರದ ಶ್ರೀನಗರ ಏರ್`ಪೋರ್ಟ್`ನಲ್ಲಿ ಬಂಧಿಸಲಾಗಿದೆ. ಆಂಟಿ ಹೈಜಾಕ್ ದಳದ ಪರಿಶೀಲನೆ ವೇಳೆ ಯೋಧ ಸಿಕ್ಕಿಬಿದ್ದಿದ್ದಾನೆ.
 


ಪ್ರಾಥಮಿಕ ತನಿಖೆ ಪ್ರಕಾರ, ಯೋಧ ಗ್ರೆನೇಡ್`ಗಳನ್ನ ನವದೆಹಲಿಗೆ ಕೊಂಡೊಯ್ದು ಅಲ್ಲಿ ಬೇರೆಯವರ ಕೈಗೆ ಹಸ್ತಾಂತರಿಸಲು ಮುಂದಾಗಿದ್ದ. ಬಂಧಿತ ಯೋಧನನ್ನ ಭೂಪಾಲ್ ಮುಖಿಯಾ ಎಂದು ಗುರ್ತಿಸಲಾಗಿದ್ದು, ಪಶ್ಚಿಮಬಂಗಾಳದ ಡಾರ್ಜಲಿಂಗ್ ಮೂಲದವನಾಗಿದ್ದು, ಉರಿಯಲ್ಲಿ 17 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್`ನಲ್ಲಿ ಕೆಲಸ ಮಾಡುತ್ತಿದ್ದ.

ಶ್ರೀನಗರ ಏರ್`ಪೋರ್ಟ್ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಪ್ರತಿಯೊಬ್ಬರ ಚಲನವಲನಗಳ ಮೇಲೆ ಕಣ್ಗಾವಲು ಇಡಲಾಗುತ್ತೆ. ಚೆನಾನಿ-ನಾಶ್ರೀ ನಡುವೆ ಬೃಹತ್ ಟನಲ್ ಅನ್ನ ಮೋದಿ ಉದ್ಘಾಟನೆ ಮಾಡಿದ ಮರುದಿನವೇ ಗ್ರೆನೇಡ್ ಸಾಗಿಸುತ್ತಿದ್ದ ಯೋಧನನ್ನ ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ