ಪಂಜಾಬ್ ಸಿಎಂ ವಿರುದ್ಧ ಕಣಕ್ಕಿಳಿಯಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಪ್ ನಾಯಕ

ಶುಕ್ರವಾರ, 6 ಜನವರಿ 2017 (19:11 IST)
ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ವಿರುದ್ಧ ಕಣಕ್ಕಿಳಿಯಲು ದೆಹಲಿ ಆಪ್ ನಾಯಕ ಜರ್ನೈಲ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  
 
ನಾನು ನಿನ್ನೆಯೇ ವಿಧಾನಸಭಾ ಸಭಾಪತಿ ರಾಮ್ ನಿವಾಸ್ ಗೋಯಲ್ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದೇನೆ ಎಂದು ಮಾಜಿ ಪತ್ರಕರ್ತ, ರಾಜೋರಿ ಗಾರ್ಡನ್ ಶಾಸಕ ಜರ್ನೈಲ್ ಸಿಂಗ್ ಮಾಧ್ಯಮದವರಿಗೆ ಮಾಹಿತಿ ಕೊಟ್ಟಿದ್ದಾರೆ. 
 
ದೆಹಲಿಯಲ್ಲಿ ಅಭೂತಪೂರ್ವ ಗೆಲವು ದಾಖಲಿಸಿ ಆಡಳಿತವನ್ನು ನಡೆಸುತ್ತಿರುವ ಕೇಜ್ರಿವಾಲ್ ಮತ್ತೀಗ ಪಂಜಾಬ್‌ನಲ್ಲಿ ಅಧಿಕಾರ ಪಡೆಯುವುದರತ್ತ ದೃಷ್ಟಿ ಹರಿಸಿದ್ದಾರೆ. 
 
ಐದು ಬಾರಿ ಮುಖ್ಯಮಂತ್ರಿಯಾಗಿರುವ ಅಕಾಲಿ ದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಶತಾಯಗತಾಯ ಸೋಲಿಸಲೇಬೇಕೆಂಬ ಪಣ ಹೊತ್ತಿರುವ ಆಪ್ ಲಂಬಿ ವಿಧಾನಸಭಾ ಕ್ಷೇತ್ರದಿಂದ ಜರ್ನೈಲ್ ಸಿಂಗ್ ಅವರನ್ನು ಕಣಕ್ಕಿಳಿಸುತ್ತಿದೆ.
 
ಪಂಜಾಬ್‌ನಲ್ಲಿ ಫೆಬ್ರವರಿ 4 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ