ಬಿಜೆಪಿ ಮಹಾರಾಷ್ಟ್ರದ ಗ್ರಾಮಗಳನ್ನು ಮಾರಾಟ ಮಾಡ್ತಿದೆ : ಉದ್ಧವ್ ಠಾಕ್ರೆ

ಶನಿವಾರ, 10 ಡಿಸೆಂಬರ್ 2022 (06:31 IST)
ಮುಂಬೈ : ಗಡಿ ವಿವಾದಕ್ಕೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತೊಂದು ಟ್ವಿಸ್ಟ್ ನೀಡಲು ಪ್ರಯತ್ನಿಸಿದ್ದಾರೆ.

ಕರ್ನಾಟಕ ಚುನಾವಣೆ ಗೆಲ್ಲಲು ಬಿಜೆಪಿಯೇ ಮಹಾರಾಷ್ಟ್ರದ ಗ್ರಾಮಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಆರೋಪ ಮಾಡಿದ್ದಾರೆ.

ಮಹಾರಾಷ್ಟ್ರವನ್ನು ಅಸ್ಥಿರಗೊಳಿಸುವ ಸಂಚನ್ನು ಬಿಜೆಪಿ ನಡೆಸ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅತ್ತ ಕರ್ನಾಟಕ ಸೇರುತ್ತೇವೆ ಅಂತಾ ಠರಾವು ಹೊರಡಿಸಿದ್ದ ಅಕ್ಕಲಕೋಟೆಯ 11 ಗ್ರಾಮಪಂಚಾಯಿತಿಗಳ ಮೇಲೆ ಶಿಂಧೆ ಸರ್ಕಾರ ಕೆಂಗಣ್ಣು ಬೀರಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ 11 ಗ್ರಾಪಂಗಳ ಅಧಿಕಾರಿಗಳನ್ನು ಸೇವೆಯಿಂದ ತೆಗೆದುಹಾಕುವ ಬೆದರಿಕೆ ಹಾಕಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ