ಜಾಗತಿಕ ಉಗ್ರನಿಗೆ ಗೌರವ ನೀಡಿ ಎಡವಟ್ಟು ಮಾಡಿಕೊಂಡ ಕೇಂದ್ರ ಸಚಿವ

ಭಾನುವಾರ, 5 ಮೇ 2019 (11:59 IST)
ಜಾರ್ಖಂಡ್ : ವಿಶ್ವಸಂಸ್ಥೆಯೇ ಜಾಗತಿಕ  ಉಗ್ರನೆಂದು ಘೋಷಿಸಿದ ಅಜರ್ ಮಸೂದ್‌ ನನ್ನು ಕೇಂದ್ರ ಸಚಿವರೊಬ್ಬರು ಮಸೂದ್ "ಜೀ" ಎಂದು ಹೇಳುವ ಮೂಲಕ‌ ಎಡವಟ್ಟು ಮಾಡಿಕೊಂಡಿದ್ದಾರೆ.




ಈ ಹಿಂದೆ ಬಿಹಾರ ಮಾಜಿ ‌ಮುಖ್ಯಮಂತ್ರಿ ಜೀತನ್ ರಾಂ ಮಾಂನ್ಜಿ, ಮಸೂದ್‌ ಗೆ ಜೀ ಎಂದು ಕರೆದಿದ್ದರು. ಇದಕ್ಕೆ  ‌ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.


ಆದರೆ ಇದೀಗ ಕೇಂದ್ರ ಸಚಿವ ಜಯಂತ್ ಸಿನ್ಹಾ ಚುನಾವಣಾ ಭಾಷಣದ ವೇಳೆ, ವಿಶ್ವಸಂಸ್ಥೆಯಲ್ಲಿ ಮಸೂದ್ "ಜೀ"ಯನ್ನು ಕಪ್ಪುಪಟ್ಟಿಗೆ ಸೇರಿಸುವುದಕ್ಕೆ ಮೋದಿ ಸರಕಾರದ ವಿದೇಶಾಂಗ ನೀತಿಗಳೇ ಕಾರಣ ಎಂದಿದ್ದಾರೆ. ಇದು ಬಿಜೆಪಿ ನಾಯಕರನ್ನು ತೀವ್ರ ಮುಜುಗರಕ್ಕೀಡು ಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ