ಆಕೆ ಆರಾಧ್ಯಾ ರಾವಲ್, ಮಧ್ಯಪ್ರದೇಶದ ಝಾಬುವಾ ಪ್ರದೇಶದ ಬಾಲಕಿಯಾಗಿದ್ದು, ಗುರುವಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಹಾಯಕವಾಗಲೆಂದು ಹಣವನ್ನು ಪರಿಹಾರ ನಿಧಿಗೆ ಹಣ ಕಳುಹಿಸಿದ್ದಾಳೆ.
ನನ್ನ ಕಾಲೋನಿಯಲ್ಲಿ ವಾಸಿಸುವ ಅನೇಕ ಮಕ್ಕಳನ್ನು ನೋಡಿದ್ದೇನೆ. ಪೋಷಕರು ಬಡವರಾಗಿದ್ದರಿಂದ ಅವರಿಗೆ ಶಿಕ್ಷಣವನ್ನು ಪಡೆಯಲಾಗುತ್ತಿಲ್ಲ. ಹೀಗಾಗಿ ನನ್ನಲ್ಲಿ ಸಂಗ್ರಹವಾದ ಹಣವನ್ನು ಪ್ರಧಾನಿಯವರಿಗೆ ನೀಡ ಬಯಸಿದ್ದೇನೆ. ಅವರದನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯೋಗಿಸುತ್ತಾರೆ ಎಂಬ ನಂಬಿಕೆ ನನ್ನದು. ಈ ದೇಶದಲ್ಲಿರುವ ಪ್ರತಿಯೊಬ್ಬ ಹುಡುಗಿಯರು ಶೈಕ್ಷಣಿಕವಾಗಿ ಸಬಲರಾಗಬೇಕು ಎಂದಾಕೆ ಮುದ್ದು ಭಾಷೆಯಲ್ಲಿ ಹೇಳುತ್ತಾಳೆ.