ಭ್ರಷ್ಟ ಲಾಲೂ ಯಾದವ್ ಪುತ್ರನನ್ನು ಪದಚ್ಯುತಗೊಳಿಸಲು ನಿತೀಶ್ ಸಜ್ಜು

ಶುಕ್ರವಾರ, 14 ಜುಲೈ 2017 (12:36 IST)
ಪಾಟ್ನಾ: ಬಿಹಾರದಲ್ಲಿ ಆರ್ ಜೆಡಿ ಮತ್ತು ಜೆಡಿಯು ಮಧ್ಯೆ ಬಿರುಕು ಮೂಡುವಂತಹ ಮಹತ್ವದ ನಿರ್ಧಾರ ಕೈಗೊಳ್ಳಲು ಸಿಎಂ ನಿತೀಶ್ ಕುಮಾರ್ ಸಜ್ಜಾಗಿದ್ದಾರೆ. ಅಕ್ರಮ ಆಸ್ತಿ ಪ್ರಕರಣದ ಆರೋಪಿಯಾಗಿರುವ ಬಿಹಾರ ಉಪ ಮುಖ್ಯಮಂತ್ರಿ ಹಾಗೂ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಗೆ ಪೆಟ್ಟು ನೀಡಲು ನಿತೀಶ್ ಸಜ್ಜಾಗಿದ್ದಾರೆ.


ಸಿಬಿಐ ತನಿಖೆ ಎದುರಿಸುತ್ತಿರುವ ಹೊರತಾಗಿಯೂ ತಮ್ಮ ಪುತ್ರ ರಾಜೀನಾಮೆ ನೀಡಲ್ಲ ಎಂದು ಪಟ್ಟು ಹಿಡಿದು ಕುಳಿತಿರುವ ಲಾಲೂ ಪ್ರಸಾದ್ ಯಾದವ್ ಗೆ ಮುಖಭಂಗ ಮಾಡಲು ಸಿಎಂ ನಿತೀಶ್ ನಿರ್ಧರಿಸಿದ್ದಾರೆ.

ಇತ್ತೀಚೆಗಷ್ಟೇ ನಿತೀಶ್ ತೇಜಸ್ವಿ ಯಾದವ್ ತಾವಾಗಿಯೇ ರಾಜೀನಾಮೆ ನೀಡಲು ಗಡುವು ವಿಧಿಸಿದ್ದರು. ಆದರೆ ಇದಕ್ಕೆ ತೇಜಸ್ವಿ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ಅವರನ್ನು ಪದಚ್ಯುತಗೊಳಿಸಲು ಸಿಎಂ ನಿತೀಶ್ ಚಿಂತನೆ ನಡೆಸಿದ್ದಾರೆ. ಇದು ಬಿಹಾರ ಮೈತ್ರಿ ಸರ್ಕಾರದ ಮೇಲೆ ಮತ್ತಷ್ಟು ಹೊಡೆತ ಬೀಳಬಹುದು.

ಇದನ್ನೂ ಓದಿ.. ಎಕ್ಸ್ ಕ್ಯೂಸ್ ಮಿ… ಜಹೀರ್ ಖಾನ್ ಪದವಿಗೆ ಕೊಂಚ ಟ್ವಿಸ್ಟ್ ಕೊಟ್ಟ ಬಿಸಿಸಿಐ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ