ಹತ್ರಾಸ್ ಪ್ರಕರಣ: ವಿವಾದ ಸೃಷ್ಟಿಸಿದ ಪೊಲೀಸರಿಗೆ ಸಿಎಂ ಯೋಗಿ ಕೊಟ್ಟ ಶಿಕ್ಷೆಯೇನು ಗೊತ್ತಾ?!

ಶನಿವಾರ, 3 ಅಕ್ಟೋಬರ್ 2020 (09:28 IST)
ಲಕ್ನೋ: ಹತ್ರಾಸ್ ನಲ್ಲಿ ಯುವತಿಯ ಅತ್ಯಾಚಾರ, ಅಮಾನವೀಯ ಹತ್ಯೆಗೆ ಕಾರಣರಾದ ಪೊಲೀಸರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಕ್ಕ ಶಾಸ್ತಿ ಮಾಡಿದ್ದಾರೆ.


ಸಂತ್ರಸ್ತ ಯುವತಿಯ ಕುಟುಂಬದವರನ್ನೂ ದೂರವಿಟ್ಟು, ರಾತ್ರೋ ರಾತ್ರಿ ಅಂತ್ಯಸಂಸ್ಕಾರ ಮಾಡಿ ಪ್ರಕರಣಕ್ಕೆ ಅಂತ್ಯ ಹಾಡಲು ಯತ್ನಿಸಿದ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ವೀರ್ ಮತ್ತು ನಾಲ್ವರು ಇತರ ಪೊಲೀಸರನ್ನು ಅಮಾನತು ಮಾಡಿ ಸಿಎಂ ಶಿಕ್ಷೆ ನೀಡಿದ್ದಾರೆ.

ಅಷ್ಟೇ ಅಲ್ಲ, ಈ ಪೊಲೀಸ್ ಅಧಿಕಾರಿಗಳು ಈಗ ನಾರ್ಕೋ ಟೆಸ್ಟ್ ಗೊಳಗಾಗಲಿದ್ದು, ಪ್ರಕರಣದಲ್ಲಿ ನಿಜವಾಗಿ ನಡೆದಿದ್ದೇನೆಂದು ಬಾಯ್ಬಿಡಲೇಬೇಕಾಗಿದೆ. ಈಗಾಗಲೇ ಸಿಎಂ ಯೋಗಿ ಮಹಿಳೆಯ ಘನತೆಗೆ ಧಕ್ಕೆ ತಂದವರನ್ನು ಸುಮ್ಮನೇ ಬಿಡಲ್ಲ. ಭವಿಷ್ಯದ ತಲೆಮಾರು ಕೂಡಾ ನೆನೆಸಿಕೊಳ್ಳುವಂತಹ ಶಿಕ್ಷೆ ನೀಡುವುದಾಗಿ ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ