ಪ್ರಧಾನಿ ಮೋದಿ ಗಾಯಾಳು ಸೈನಿಕರನ್ನು ಭೇಟಿ ಮಾಡಿದ್ದು ತೋರಿಕೆಗಾಗಿ ಎಂದ ಕಾಂಗ್ರೆಸ್ ನಾಯಕ

ಶನಿವಾರ, 4 ಜುಲೈ 2020 (10:21 IST)
ನವದೆಹಲಿ: ಚೀನಾ ಸೈನಿಕರ ಜತೆಗಿನ ಸಂಘರ್ಷದಲ್ಲಿ ಗಾಯಗೊಂಡ ಸೈನಿಕರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಪ್ರಧಾನಿ ಮೋದಿ ನಡೆಯನ್ನು ಕಾಂಗ್ರೆಸ್ ಟೀಕೆ ಮಾಡಿದೆ.

 

ಕಾಂಗ್ರೆಸ್ ನಾಯಕ ಅಭಿಷೇಕ್ ದತ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಗಾಯಾಳು ಸೈನಿಕರೊಂದಿಗಿನ ಪ್ರಧಾನಿ ಭೇಟಿ ಕೇವಲ ಫೋಟೋಗಾಗಿ. ಇವರೆಲ್ಲರೂ ಆಸ್ಪತ್ರೆಯಲ್ಲಿದ್ದಂತೆಯೇ ತೋರುತ್ತಿಲ್ಲ. ಇಲ್ಲಿ ಔಷಧವಾಗಲೀ, ಡ್ರಿಪ್ಸ್ ಬಾಟಲಿಗಳಾಗಿ ಕಂಡುಬರುತ್ತಿಲ್ಲ. ಇದೆಲ್ಲಾ ಕೇವಲ ಶೋ ಆಫ್ ಎಂದು ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ