ಪ್ರಧಾನಿ ಮೋದಿಯನ್ನು ಹೀಗೆ ಕರೆದು ಅವಮಾನ ಮಾಡಿದ ಕಾಂಗ್ರೆಸ್ ಶಾಸಕಿ
ಸೊಲಾಪುರದ ಕಾಂಗ್ರೆಸ್ ಶಾಸಕಿ ಪ್ರಣತಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಡೆಂಗ್ಯೂ ಸೊಳ್ಳೆಯಂತೆ, ಅವರನ್ನು ಮರಳಿ ಕಳುಹಿಸಬೇಕು ಎಂದಿದ್ದಾರೆ.
ಪ್ರಣತಿಯ ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪ್ರಧಾನಿಯಂತಹ ಘನತೆವೆತ್ತ ಹುದ್ದೆಯಲ್ಲಿರುವ ವ್ಯಕ್ತಿಗೆ ಈ ರೀತಿಯ ಪದ ಪ್ರಯೋಗಿಸಿ ಅವಮಾನಿಸುವುದು ಸರಿಯಲ್ಲ ಎಂದು ಕಾಂಗ್ರೆಸ್, ಎನ್ ಸಿಪಿ ನಾಯಕರಿಂದಲೇ ಆಕ್ಷೇಪ ವ್ಯಕ್ತವಾಗಿದೆ.