video, ವಂದೇ ಭಾರತ್ನಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆ, ರೈಲಿನೊಳಗೆ ಜಲಪಾತ ಎಂದ ಕಾಂಗ್ರೆಸ್
ಪ್ರಯಾಣಿಕರೊಬ್ಬರು ಪೋಸ್ಟ್ನ್ನು ಹಂಚಿ, ವಂದೇಭಾರತ್ ರೈಲಿನಲ್ಲಿ ಎಸಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ನೀರಿನ ಸೋರಿಕೆ. ಪ್ರೀಮಿಯಂ ದರದ ಹೊರತಾಗಿಯೂ ಅತ್ಯಂತ ಅಹಿತಕರ ಪ್ರಯಾಣ. ಹಲವಾರು ದೂರುಗಳನ್ನು ಸಲ್ಲಿಸಲಾಗಿದೆ ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ದಯವಿಟ್ಟು ಅದನ್ನು ಪರಿಶೀಲಿಸಿ ಎಂದು ಬರೆದುಕೊಂಡಿದ್ದಾರೆ.
ಈ ವೀಡಿಯೊವು ಜನರಲ್ಲಿ ರೈಲುಗಳ ನಿರ್ವಹಣೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿತು ಮತ್ತು ಅನೇಕರು ಸೇವೆಯನ್ನು ಟೀಕಿಸಿದರು. ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಯಾಣಿಕನು ತನ್ನ ಟಿಕೆಟ್ಗೆ ಸಂಪೂರ್ಣ ಮರುಪಾವತಿಗೆ ಒತ್ತಾಯಿಸಿದನು.