ಅಯೋಧ್ಯೆ, ಪ್ರಯಾಗ್‌ರಾಜ್‌ನಲ್ಲಿ ಪ್ರಮುಖ ಗಣ್ಯರಿಗೆ ಅತಿಥಿ ಗೃಹ ನಿರ್ಮಾಣ

Sampriya

ಶುಕ್ರವಾರ, 21 ಜೂನ್ 2024 (20:03 IST)
ಲಕ್ನೋ: ರಾಷ್ಟ್ರಪತಿ, ಪ್ರಧಾನಿ ಮತ್ತು ರಾಜ್ಯಪಾಲರಂತಹ ಗಣ್ಯರಿಗಾಗಿ ಅಯೋಧ್ಯೆ ಮತ್ತು ಪ್ರಯಾಗ್‌ರಾಜ್‌ನಲ್ಲಿ ಅತಿಥಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಅತಿಥಿ ಗೃಹಗಳ ನಿರ್ಮಾಣ ಸ್ಥಳ, ಲೇಔಟ್‌ಗಳು, ಸೌಲಭ್ಯಗಳು ಮತ್ತು ಅಲಂಕಾರಗಳ ಪ್ರಸ್ತುತಿಯನ್ನು ಪರಿಶೀಲಿಸಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎಸ್ಟೇಟ್ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ, ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ರಾಜ್ಯಪಾಲರಂತಹ ಗಣ್ಯರು ಮತ್ತು ಪ್ರಪಂಚದಾದ್ಯಂತದ ಇತರ ಪ್ರಮುಖ ಸಂದರ್ಶಕರಿಗೆ ಅವಕಾಶ ಕಲ್ಪಿಸಲು ಅಯೋಧ್ಯೆ ಮತ್ತು ಪ್ರಯಾಗ್‌ರಾಜ್‌ನಲ್ಲಿ ಅತ್ಯುತ್ತಮ ಗುಣಮಟ್ಟದ ಅತಿಥಿ ಗೃಹಗಳ ಅಗತ್ಯವನ್ನು ಮುಖ್ಯಮಂತ್ರಿ ಒತ್ತಿ ಹೇಳಿದರು.

ಆದಷ್ಟು ಬೇಗ ಕಾಮಗಾರಿ ಆರಂಭಿಸಬೇಕು ಎಂದು ಸೂಚನೆ ನೀಡಿದರು.     ಅಯೋಧ್ಯೆಯ ಸರಯೂ ನದಿಯ ದಡದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಭೂಮಿ ಅತಿಥಿ ಗೃಹದ ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ಆದಿತ್ಯನಾಥ್ ಹೇಳಿದರು.

ಅತಿಥಿ ಗೃಹವು ಸುಮಾರು ಮೂರೂವರೆ ಎಕರೆ ವಿಸ್ತೀರ್ಣವನ್ನು ಹೊಂದಿದ್ದು, ವೈಷ್ಣವ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ವಾಸ್ತುಶಿಲ್ಪದ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಟ್ಟಡ ರಾಮಜನ್ಮಭೂಮಿ ಮಂದಿರಕ್ಕಿಂತ ಎತ್ತರವಾಗಿರಬಾರದು ಎಂದು ಸೂಚನೆ ನೀಡಿದರು.
     ಪ್ರಯಾಗ್‌ರಾಜ್‌ನಲ್ಲಿ, ಉದ್ದೇಶಿತ ಅತಿಥಿ ಗೃಹವು ಮಹರ್ಷಿ ದಯಾನಂದ ಮಾರ್ಗದಲ್ಲಿ 10,300 ಚದರ ಮೀಟರ್‌ಗಳನ್ನು ಒಳಗೊಂಡಿದೆ. ಇದು ಕಾನ್ಫರೆನ್ಸ್ ಹಾಲ್‌ಗಳು, ಊಟದ ಪ್ರದೇಶಗಳು ಮತ್ತು ಕ್ಯಾಂಟೀನ್‌ಗಳಂತಹ ಸೌಕರ್ಯಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿಕೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ