ಶಿಕ್ಷೆಯ ಭಯಕ್ಕೆ ಜೀವಕೊನೆಗಾಣಿಸಿದ ಆರೋಪಿ

ಭಾನುವಾರ, 28 ಮಾರ್ಚ್ 2021 (09:44 IST)
ರಾಯ್ಪುರ: ಹೆಣ್ಣಿನ ಮಾನಭಂಗ ಮಾಡುವಾಗ ಇಲ್ಲದ ಭಯ ಈ ವ್ಯಕ್ತಿಗೆ ಪೊಲೀಸರ ಭಯ ಕಾಡಿದೆ. ಅದೇ ಕಾರಣಕ್ಕೆ ತನ್ನ ಜೀವವನ್ನೇ ಕೊನೆಗೊಳಿಸಿದ್ದಾನೆ.


ಇಂತಹದ್ದೊಂದು ಘಟನೆ ನಡೆದಿರುವುದು ರಾಜಸ್ಥಾನದಲ್ಲಿ. 20 ರ ಹರೆಯದ ಯುವಕನೊಬ್ಬ ಅಪ್ರಾಪ್ತ ಬಾಲಕಿಯ ಶೀಲಕೆಡಿಸಿದ್ದ. ಈ ಸಂಬಂಧ ಆತನ ವಿರುದ್ಧ ಕಳೆದ ನವಂಬರ್ ನಲ್ಲಿಯೇ ಪ್ರಕರಣ ದಾಖಲಾಗಿತ್ತು.

ಇದೀಗ ವಿಚಾರಣೆ ನಡೆಸಿದ ಪೊಲೀಸರು ಆತನ ವಿರುದ್ಧ ಅರೆಸ್ಟ್ ವಾರಂಟ್ ನೊಂದಿಗೆ ಮನೆಗೆ ಬರುತ್ತಿರುವ ಸುದ್ದಿ ತಿಳಿದು ಗಾಬರಿಯಾಗಿದ್ದ. ತನಗೆ ಶಿಕ್ಷೆಯಾಗಬಹುದೆಂಬ ಭಯಕ್ಕೆ ಆರೋಪಿ ತನ್ನ ಮನೆಯ ಕೊಠಡಿಯಲ್ಲಿ ಲಾಕ್ ಮಾಡಿಕೊಂಡು  ಕುತ್ತಿಗೆ ಸೀಳಿಕೊಂಡು ಸ್ವಯಂ ಹತ್ಯೆ ಮಾಡಿಕೊಂಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ