ಅಲೌಕಿಕ ಶಕ್ತಿಗಳನ್ನು ಸಮಾಧಾನಪಡಿಸಲು ದಂಪತಿಗಳು ಹೆಣ್ಣುಮಕ್ಕಳಿಗೆ ಇಂತಹ ಗತಿ ತಂದರು

ಮಂಗಳವಾರ, 26 ಜನವರಿ 2021 (07:31 IST)
ಹೈದರಾಬಾದ್ : ಅಲೌಕಿಕ ಶಕ್ತಿಗಳನ್ನು ಸಮಾಧಾನಪಡಿಸಲು ದಂಪತಿಗಳು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಗಳು ವೃತ್ತಿಯಲ್ಲಿ ಶಿಕ್ಷಕರಾಗಿದ್ದು,  ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ನಡುವೆ ಮನೆಯಲ್ಲಿ ನಿಯಮಿತವಾಗಿ ಪೂಜೆಗಳನ್ನು ನಡೆಸುತ್ತಿದ್ದರು. ಪೂಜೆಯ ಇಂತಹ ಕೃತ್ಯವನ್ನು ಎಸಗಿರುವುದಾಗಿ ಆರೋಪಿ ತನ್ನ ಸಹದ್ಯೋಗಿಯ ಬಳಿ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕೊಲೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ