ಇದು ನಡೆದಿದ್ದು ಮಧ್ಯಪ್ರದೇಶದಲ್ಲಿ. ದಲಿತ ಸಮುದಾಯದ ಮದುಮಗನೊಬ್ಬ ಕುದುರೆ ಏರಿ ಮದುವೆಯಾಗಲು ಹೊರಟುದುದನ್ನು ಕಂಡು ಸಹಿಸದಾದ ಮೇಲ್ಜಾತಿಯ ಜನರು, ಆತನ ಮತ್ತು ದಿಬ್ಬಣದ ಮೇಲೆ ಸಹ ಕಲ್ಲೆಸೆದು ಅಮಾನುಷ, ನಿರ್ಲಜ್ಜ ವರ್ತನೆಯನ್ನು ತೋರಿದ್ದಾರೆ. ಅಲ್ಲದೇ ಆತ ಸವಾರಿ ಹೊರಟಿದ್ದ ಕುದುರೆಯನ್ನು ಸಹ ಎಳೆದೊಯ್ದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 72 ಜನರ ಮೇಲೆ ದೂರು ದಾಖಲಾಗಿದೆ.
ಮೇಲ್ವರ್ಗದ ಜನರ ಹಲ್ಲೆಯ ಅನುಮಾನ ಮೊದಲೇ ಇದ್ದುದರಿಂದ ವಧುವಿನ ತಂದೆ ಮೊದಲೇ ಪೊಲೀಸರು ಸಹಾಯವನ್ನು ಕೋರಿದ್ದ . ಆದರು ಕೂಡ ದಿಬ್ಬಣದ ಮೇಲೆ ಹಲ್ಲೆ ನಡೆದಿದೆ.