ತಮಿಳುನಾಡಿಗೆ ದೇವೇಗೌಡರು ಹೋಗಿದ್ಯಾಕೆ?

ಸೋಮವಾರ, 20 ಮೇ 2019 (13:38 IST)
ಚುನಾವಣೋತ್ತರ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಜೆಡಿಎಸ್ ವರಿಷ್ಠ ತಮಿಳುನಾಡಿಗೆ ಪ್ರಯಾಣ ಬೆಳೆಸಿರುವುದು ಕುತೂಹಲ ಮೂಡಿಸಿದೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಂದ ಟೆಂಪಲ್ ರನ್ ಮುಂದುವರಿದಿದೆ.

ತಮಿಳುನಾಡಿನ ತಿರುವರೂರು ಜಿಲ್ಲೆಯ ರಾಜಗೋಪಾಲಸ್ವಾಮಿ ಮತ್ತು ಭಾಸ್ಕರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಂತರ ಶ್ರೀರಂಗಂಗೆ ಪ್ರಯಾಣ ಬೆಳೆಸಲಿದ್ದಾರೆ.

ಶ್ರೀರಂಗಂನಲ್ಲಿ ರಂಗನಾಥ ಸ್ವಾಮಿ ದೇವರ ದರ್ಶನ ಪಡೆಲಿದ್ದಾರೆ ದೇವೇಗೌಡರು.

ಕಳೆದವಾರ ವಾರವಷ್ಟೇ ಧರ್ಮಸ್ಥಳ, ಮೊನ್ನೆ ಜನ್ಮದಿನದ ಪ್ರಯುಕ್ತ ತಿರುಪತಿ ತಿಮ್ಮಪ್ಪ ದರ್ಶನ ಪಡೆದು ಬಂದಿದ್ದ ದೇವೇಗೌಡ ಕುಟುಂಬ ಇದೀಗ ಮತ್ತೆ ತಮ್ಮ ಟೆಂಪಲ್ ರನ್ ಮುಂದುವರೆಸಿದ್ದಾರೆ.

ಬೆಂಗಳೂರಿನಿಂದ ವಿಶೇಷ ವಿಮಾನ ಮೂಲಕ ತೆರಳಿದ್ದಾರೆ ಹೆಚ್.ಡಿ.ಡಿ. ದೇವೇಗೌಡರೊಂದಿಗೆ ಹೆಚ್. ಡಿ. ರೇವಣ್ಣ  ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ