ಕೆನ್ನೆಗೆ ಹೊಡೆದು ಅವಮಾನ ಮಾಡಿದ್ದಾಳೆಂದು ಮಾಲಕಿಗೆ ಕೆಲಸಗಾರ ಮಾಡಿದ್ದೇನು ಗೊತ್ತಾ?

ಭಾನುವಾರ, 1 ಡಿಸೆಂಬರ್ 2019 (06:47 IST)
ನವದೆಹಲಿ : ಕೆನ್ನೆಗೆ ಹೊಡೆದು ಅವಮಾನ ಮಾಡಿದ್ದಾಳೆಂದು 55 ವರ್ಷದ ಮಾಲಕಿಯ ಮೇಲೆ 24 ವರ್ಷದ ಕೆಲಸಗಾರನೊಬ್ಬ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ.



ಧರಮ್ ರಾಜ್ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿ. ಈತ ಟೀ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಹಣದ ವಿಚಾರಕ್ಕೆ ಮಾಲಕಿ ಹಾಗೂ ಈತನ ನಡುವೆ ಜಗಳ ನಡೆದಿದೆ. ಆಗ ಮಾಲಕಿ ಈತನ ಕೆನ್ನೆಗೆ ಬಾರಿಸಿದ್ದಾಳೆ. ಇದರಿಂದ ಕೋಪಗೊಂಡ ಆತ ರಾತ್ರಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ.


ಬೆಳಿಗ್ಗೆ ಟೀ ಕುಡಿಯಲು ಬಂದ ಗ್ರಾಹಕರು ಮಹಿಳೆಯ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ದೆಹಲಿ ಪೊಲೀಸರು ಸಿಸಿಟಿವಿ ಪರಿಶೀಲಿಸಿದ್ದು, ಅದರಲ್ಲಿ ಈ ದೃಶ್ಯ ಸೆರೆಯಾದ ಹಿನ್ನಲೆಯಲ್ಲಿ ಆರೋಪಿ ಯುವಕನನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ