ಮಾಲೀಕಳ ಜೀವ ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನಾಯಿ..!

ಶನಿವಾರ, 15 ಏಪ್ರಿಲ್ 2017 (18:20 IST)
ನಾಯಿ ನಂಬಿಕಸ್ಥ ಪ್ರಾಣಿ. ತುತ್ತು ಅನ್ನ ಹಾಕಿದ ಮಾಲೀಕನ ರಕ್ಷಣೆಗೆ ಯಾವುದೇ ಹಂತದಲ್ಲೂ ಸಿದ್ಧವಿರುತ್ತದೆ ಎಂಬುದಕ್ಕೆ ಮುಂಬೈನ ಈ ಪ್ರಕರಣ ಸಾಕ್ಷಿ. ಚಾಕುವಿನಿಂದ ಇರಿಯಲು ಬಂದ ವ್ಯಕ್ತಿಯಿಂದ ತನ್ನ ಮಾಲೀಕಳನ್ನ ರಕ್ಷಿಸಲು ತನ್ನ ಪ್ರಾಣವನ್ನೇ ಅರ್ಪಿಸಿರುವ ಘಟನೆ ಮುಂಬೈನ ಸಿಯೋನ್ ಕೋಲಿವಾಡ ಪ್ರದೇಶದಲ್ಲಿ ನಡೆದಿದೆ.

ಏನಿದು ಘಟನೆ..?: ನಾಯಿಯನ್ನ ಸಾಕಿಕೊಂಡಿದ್ದ ಸುಮತಿಯ ಸ್ನೇಹಿತೆ ತನ್ನ ಪ್ರಿಯಕರ ವೆಂಕಟೇಶನಿಂದ ದಾಳಿಗೊಳಗಾಗಿದ್ದಳು. ಚಾಕು ಹಿಡಿದು ಮನೆಗೆ ನುಗ್ಗಿದ್ದ ವೆಂಕಟೇಶ ಕೊಲೆಗೆ ಮುಂದಾಗಿದ್ದ. ಆತನಿಂದ ತಪ್ಪಿಸಿಕೊಂಡ ಆಕೆ ಸುಮತಿ ಮನೆಗೆ ಬಂದಳು. ಅಲ್ಲಿಗೂ ಹಿಂಬಾಲಿಸಿ ಬಂದಿದ್ದ ವೆಂಕಟೇಶ್`ನನ್ನ ಮನೆಗೆ ಪ್ರವೇಶಿಸದಂತೆ ಸುಮತಿ ಪ್ರತಿರೋಧ ಒಡ್ಡಿದ್ದಾಳೆ. ಈ ಸಂದರ್ಭ ಆಕೆ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಇದನ್ನ ನೋಡುತ್ತಿದ್ದ ಪೆಟ್ ಡಾಗ್ ರಿಕ್ಕಿ ವೆಂಕಟೇಶ್ ಮೇಲೆ ದಾಳಿ ನಡೆಸಿ 2 ಬಾರಿ ಕಚ್ಚಿದೆ. ಈ ಸಂದರ್ಭ ಮಾನವೀಯತೆಯನ್ನೇ ಮರೆತಿದ್ದ ಆತ ಚಾಕುವಿನಿಂದ ನಾಯಿಗೆ ಚುಚ್ಚಿ ಪರಾರಿಯಾಗಿದ್ದಾನೆ. ಮೂಕಪ್ರಾಣಿ ಮಾಲೀಕಳನ್ನ ರಕ್ಷಿಸಲು ಹೋಗಿ ಪ್ರಾಣ ಬಿಟ್ಟಿದೆ.

ಪೊಲೀಸರು ವೆಂಕಟೇಶನನ್ನ ಬಂಧಿಸಿದ್ದಾರಾದರೂ ಅಂದೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ನಾಯಿಯನ್ನೇ ತನ್ನ ಸರ್ವಸ್ವ ಅಂದುಕೊಂಡಿದ್ದ ಸುಮತಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ