ಬರ ಪರಿಹಾರ: ತಮಿಳುನಾಡಿಗೆ 2014.15 ಕೋಟಿ ರೂ. ರಾಜ್ಯಕ್ಕೆ 1235.52 ಕೋಟಿ ರೂ.

ಭಾನುವಾರ, 2 ಏಪ್ರಿಲ್ 2017 (08:15 IST)
ನವದೆಹಲಿ: ತಮಿಳುನಾಡು ಮತ್ತು ಕರ್ನಾಟಕದ ಬರಪೀಡಿತ ರೈತರ ನೆರವಿಗಾಗಿ ಕೇಂದ್ರ ಹಣ ಬಿಡುಗಡೆ ಮಾಡಿದೆ. ಇದರಲ್ಲಿ ತಮಿಳುನಾಡಿಗೆ 2014.15 ಕೋಟಿ ರೂ. ಸಿಕ್ಕಿದರೆ ರಾಜ್ಯಕ್ಕೆ 1235.52 ಕೋಟಿ ರೂ. ಅನುದಾನ ಲಭಿಸಿದೆ.

 

ತಮಿಳುನಾಡಿಗೆ ಬರ ಪರಿಹಾರ ಹಾಗೂ ವಾರ್ಧಾ ಚಂಡಮಾರುತದಿಂದಾದ ವಿನಾಶದ ಪರಿಹಾರಕ್ಕಾಗಿ ಹೆಚ್ಚಿನ ಮೊತ್ತ ಬಿಡುಗಡೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

 
ಬರ ಪರಿಹಾರದ ಜತೆ ಚಂಡಮಾರುತದಿಂದಾದ ನಷ್ಟ ಭರಿಸಲು ಸಹಾಯ ಮಾಡುವಂತೆ ತಮಿಳುನಾಡು ಸರ್ಕಾರ ಕೇಂದ್ರ ಮೊರೆ ಹೋಗಿತ್ತು. ಈ ಬಗ್ಗೆ ಕೇಂದ್ರದ ಅಧ್ಯಯನ ತಂಡ ತಮಿಳುನಾಡಿಗೆ ಭೇಟಿ ನೀಡಿ ವರದಿ ಸಲ್ಲಿಸಿದ ನಂತರ ಅನುದಾನ ಬಿಡುಗಡೆ ಮಾಡಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ