ಇಂಧೋರ್: ದೇಶದಾದ್ಯಂತ ಸಂಚಲನ ಮೂಡಿಸಿರುವ ಹನಿಮೂನ್ ಮರ್ಡರ್ ಕೇಸ್ ನಲ್ಲಿ ಕೊಲೆಗೀಡಾದ ಪತಿ ರಾಜ ರಘುವಂಶಿ ಜೊತೆ ಫಸ್ಟ್ ನೈಟ್ ಮಾಡಿಕೊಳ್ಳದಂತೆ ಪತ್ನಿ ಸೋನಂ ಮಾಡಿದ್ದ ಪ್ಲ್ಯಾನ್ ರಿವೀಲ್ ಆಗಿದೆ.
ಮೇ 10 ರಂದು ಸೋನಂ ಮತ್ತು ರಾಜ ರಘುವಂಶಿ ಮದುವೆಯಾಗಿತ್ತು. ಆದರೆ ಮದುವೆಯಾಗಿ ವಾರ ಕಳೆದರೂ ಸೋನಂ ಗಂಡನ ಜೊತೆ ಫಸ್ಟ್ ನೈಟ್ ಮಾಡಿಕೊಂಡಿರಲಿಲ್ಲ. ಗಂಡ ಕೇಳಿದ್ದಕ್ಕೆ ಆಕೆ ಒಂದು ಉತ್ತರವನ್ನೂ ರೆಡಿ ಮಾಡಿಕೊಂಡಿದ್ದಳು.
ಗಂಡನ ಜೊತೆ ಫಸ್ಟ್ ನೈಟ್ ಮಾಡಿಕೊಳ್ಳದಂತೆ ಸೋನಂ ಪ್ಲ್ಯಾನ್ ಮಾಡಿದ್ದಳು. ಇದಕ್ಕೆ ದೇವಸ್ಥಾನದ ಭೇಟಿ ನೆಪವೊಡ್ಡಿದ್ದಳು. ನಾವಿಬ್ಬರೂ ಹನಿಮೂನ್ ಹೋಗೋಣ. ಗುವಾಹಟಿಯಲ್ಲಿ ಕಾಮಕ್ಯ ದೇವಾಲಯಕ್ಕೆ ಹೋಗೋಣ. ದೇವಾಲಯ ಭೇಟಿ ಬಳಿಕ ಫಸ್ಟ್ ನೈಟ್ ಮಾಡಿಕೊಳ್ಳೋಣ ಎಂದು ಸೋನಂ ಗಂಡನನ್ನು ನಂಬಿಸಿದ್ದಳು.
ಹೀಗಾಗಿ ಮದುವೆಯಾಗಿದ್ದರೂ ರಾಜ ರಘುವಂಶಿ ಪತ್ನಿಯಿಂದ ದೂರವೇ ಇದ್ದ. ಮೇಘಾಲಯಕ್ಕೆ ಹನಿಮೂನ್ ಗೆ ಹೋಗುವ ದಾರಿಯಲ್ಲೇ ಗುವಾಹಟಿಗೂ ಮೇ 20 ರಂದು ದಂಪತಿ ಭೇಟಿ ನೀಡಿದ್ದರು. ಇದಾದ ಬಳಿಕ ಮೂರು ದಿನಕ್ಕೆ ರಾಜ ರಘುವಂಶಿ ನಾಪತ್ತೆಯಾಗಿದ್ದ. ಪ್ರಿಯಕರ ರಾಜ್ ಕುಶ್ವಾಹ ಜೊತೆ ಸಂಬಂಧವಿದ್ದಿದ್ದರಿಂದಲೇ ಗಂಡನನ್ನು ಆಕೆ ದೂರವಿಟ್ಟಿದ್ದಳು ಎಂದು ತನಿಖಾಧಿಕಾರಿಗಳೊಬ್ಬರು ಹೇಳಿದ್ದಾರೆ.