ಭೀಕರ ರಸ್ತೆ ಅಪಘಾತದಲ್ಲಿ 8 ಜನರು ಬಲಿ

ಶನಿವಾರ, 10 ಜೂನ್ 2017 (12:29 IST)
ಜಗತ್‌ಸಿಂಗ್‌ಪುರ:ಆಟೋ ರಿಕ್ಷಾ ಗೆ ಟ್ರಕ್‌ ಢಿಕ್ಕಿಯಾದ ಪರಿಣಾಮ ಎಂಟು ಮಂದಿ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಒಡಿಶಾದ ಜಗತ್ ಸಿಂಗ್ ಪುರದಲ್ಲಿ ನಡೆದಿದೆ. 
 
ನೇಮಾಲದಲ್ಲಿ ಸ್ನಾನ ಪೂರ್ಣಿಮಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರು ತಮ್ಮ ಊರಾದ ಮಚ್ಚಗಾಂವ್‌ಗೆ ಮರಳುತ್ತಿದ್ದರು. ಈ ವೇಳೆ ಚಾಂದೋಲ್‌ ಎಂಬಲ್ಲಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಯುವಕ ಸೇರಿದಂತೆ ಒಟ್ಟು ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಅಪಘಾತದ ಬಳಿಕ ಟ್ರಕ್‌ ಚಾಲಕನು ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಈ ಅಪಘಾತದಲ್ಲಿ ಮಡಿದವರಿಗೆ ಮತ್ತು ಗಾಯಾಳುಗಳಿಗೆ ಸೂಕ್ತ ಮೊತ್ತದ ಪರಿಹಾರ ನೀಡುವಂತೆ ಆಗ್ರಹಿಸಿ ಸ್ಥಳೀಯರು ಚಾಂದೋಲ ಸಮೀಪದ ಜಗತ್‌ಸಿಂಗ್‌ಪುರ - ಮಚ್ಚಗಾಂವ್‌ ರಸ್ತೆ ತಡೆ ನಡೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ