ಭೂತ ಹೇಳಿತೆಂದು ಮಗಳ ಕಿವಿ ಕತ್ತರಿಸಿದ ತಂದೆ..!

ಶುಕ್ರವಾರ, 23 ಜೂನ್ 2017 (11:15 IST)
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ದೆಹಲಿಯ ವ್ಯಕ್ತಿಯೊಬ್ಬ ತನ್ನ 3 ವರ್ಷದ ಮಗಳ ಕಿವಿ ಕತ್ತರಿಸಿದ್ದಾನೆ. ಇದಕ್ಕೆ ಆತ ಭೂತ ನನ್ನ ಹೆದರಿಸಿ ಈ ಕೆಲಸ ಮಾಡುವಂತೆ ಪ್ರೇರೇಪಿಸಿತು ಎಂದು ಹೇಳಿಕೊಂಡಿದ್ದಾನೆ.

35 ವರ್ಷದ ಅಮೃತ್ ಬಹದ್ದೂರ್ ಎಂಬ ಪಾಪಿ ತಂದೆ ಇಂತಹ ಹೀನ ಕೃತ್ಯ ಎಸಗಿದ್ದಾನೆ. ನವದೆಹಲಿಯ ಜಿಟಿವಿ ಎನ್ ಕ್ಲೇವ್`ನಲ್ಲಿ ಬೆಳಗಿನ ಜಾವ ಈ ಘಟನೆ ನಡೆದಿದೆ.

ಬಹದ್ದೂರ್ ಕುಟುಂಬಸ್ಥರು ಹೇಳುವ ಪ್ರಕಾರ, ಕೆಲ ತಿಂಗಳ ಹಿಂದೆ ಒಂದೂವರೆ ವರ್ಷದ ಮಗಳು ಮೃತಪಟ್ಟ ಬಳಿಕ ೀತ ಮಾನಸಿಕವಾಗಿ ಘಾಸಿಗೊಳಗಾಗಿದ್ದಾನೆ. ಅಂದಿನಿಂದ ಭಯಗ್ರಸ್ಥವಾಗಿರುವ ಈತ ಭೂತಗಳು ತನ್ನ ಮತ್ತೊಂದು ಮಗುವನ್ನ ಕರೆದುಕೊಂಡು ಹೋಗಿಬಿಡುತ್ತವೆ ಎಂದು ಬಡಬಡಾಯಿಸುತ್ತಿದ್ದಾನಂತೆ.

ಅಸಂಘಟಿತ ವಲಯದ ಕಾರ್ಮಿಕನಾಗಿರುವ ಬಹದ್ದೂರ್ ಬೆಳಗ್ಗೆ 1.30 ಸುಮಾರಿಗೆ ಕಂಠ.ಪೂರ್ತಿ ಕುಡಿದು ಮನೆಗೆ ಬಂದಿದ್ದಾನೆ. ಈ ಸಂದರ್ಭ ಮಗಳ ಕಿವಿ ಕತ್ತರಿಸಿ, ಭೂತ ನನ್ನನ್ನ ಈ ಕೆಲಸ ಮಾಡಲು ಪ್ರೇರೇಪಿಸಿತು ಎಂದಿದ್ದಾನ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ