ಆಹಾರ ನಮ್ಮ ಆಯ್ಕೆ, ನಾನೊಬ್ಬ ಮಾಂಸಾಹಾರಿ: ಸಚಿವ ವೆಂಕಯ್ಯ ನಾಯ್ಡು
ಗೋ ಹತ್ಯೆ ನಿಷೇಧ ಕುರಿತಂತೆ ವಿಪಕ್ಷಗಳು ಮಾಡುವ ಆರೋಪಗಳಿಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಕೆಲವು ಹುಚ್ಚರು ಈ ರೀತಿಯ ಸುದ್ದಿ ಹಬ್ಬಿಸುತ್ತಿದ್ದಾರೆ. ಆಹಾರ ನಮ್ಮ ಆಯ್ಕೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಬಿಜೆಪಿ ಎಲ್ಲರನ್ನೂ ಸಸ್ಯಾಹಾರಿಯಾಗಿ ಮಾಡಲು ಯತ್ನಿಸುತ್ತಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಗಳೂ ನಡೆದವು. ಆದರೆ ನಾನೊಬ್ಬ ಮಾಂಸಾಹಾರಿ. ಹಾಗಿದ್ದೂ ಬಿಜೆಪಿಯ ಅಧ್ಯಕ್ಷನಾಗಲಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.