ಆಧಾರ್ ಕಾರ್ಡ್ ಇಲ್ಲವೆಂದು ಬಾಲಕಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ!
ಈ ವಿಚಾರವನ್ನು ದೆಹಲಿಯ ಬಿಜೆಪಿ ನಾಯಕ ಮನೋಜ್ ತಿವಾರಿ ಟ್ವೀಟ್ ಮೂಲಕ ಹೇಳಿಕೊಂಡಿದ್ದು, ಕೇಜ್ರಿವಾಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾಗೆ ಟ್ಯಾಗ್ ಮಾಡಿ ಬಾಲಕಿಗೆ ಚಿಕಿತ್ಸೆ ಕೊಡಿಸಲು ನೆರವಾದರೆ ಅದುವೇ ನವರಾತ್ರಿ ಹಬ್ಬದ ನಿಜವಾದ ಆಚರಣೆ ಮಾಡಿದಂತೆ ಎಂದು ಮನವಿ ಮಾಡಿದ್ದರು.
ಮನೋಜ್ ತಿವಾರಿ ಟ್ವೀಟ್ ಗೆ ತಕ್ಷಣ ಸ್ಪಂದಿಸಿದ ಸಚಿವರು ಆ ಬಾಲಕಿಯನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಹಾಗೂ ಟ್ವೀಟ್ ಮೂಲಕವೇ ಈ ವಿಚಾರದಲ್ಲಿ ಮನೋಜ್ ತಿವಾರಿಗೆ ಮಾಹಿತಿ ನೀಡಿದರು.