ಗೋವಾ ಸಚಿವ ಪಾಲ್ಯೇಕರ್‌ ವಿರುದ್ಧ ಕೆಂಡಕಾರಿದ ಪ್ರತಾಪ್‌ಸಿಂಹ

ಸೋಮವಾರ, 15 ಜನವರಿ 2018 (10:54 IST)
ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೋವಾ ನೀರಾವರಿ ಸಚಿವ ವಿನೋದ ಪಾಲ್ಯೇಕರ್ ಅವರ ವಿರುದ್ಧ ಬಿಜೆ‍ಪಿ ಸಂಸದ ಪ್ರತಾಪ್‌ಸಿಂಹ ಕೆಂಡಕಾರಿದ್ದಾರೆ.

ಗೋವಾ ಸಚಿವ ವಿನೋದ ಪಾಲ್ಯೇಕರ್ ಸರಿಯಾದ ಪದಗಳನ್ನು ಬಳಕೆ ಮಾಡಬೇಕು. ಇಲ್ಲದಿದ್ದರೆ ಇನ್ನೊಮ್ಮೆ ಕರ್ನಾಟಕಕ್ಕೆ ಬಂದಾಗ ನಾವೇ ಪಾಠ ಕಲಿಸಬೇಕಾಗುತ್ತದೆ ಎಂದು ಗೋವಾ  ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಟ್ವಿಟ್‌ ಮಾಡಿದ್ದಾರೆ.
 
ಕುಡಿಯುವ ನೀರು ಕೊಡುವ ವಿಷಯದಲ್ಲಿ ನಿಮ್ಮ ನಿಲುವಿಗೆ ಗೌರವವಿದೆ. ಆದರೆ, ಕನ್ನಡಿಗರ ಬಗ್ಗೆ ಪದಗಳು ಬಳಕೆ ಮಾಡುವಾಗ ಎಚ್ಚರವಹಿಸಬೇಕು ಎಂದು ಗೋವಾ ಬಿಜೆಪಿ ವಿರುದ್ಧ ಧ್ವನಿ ಎತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ