ಬೇಸತ್ತು ಹೋದೆ: ಕ್ಯಾನ್ಸರ್‌ ರೋಗಿ ಅಜ್ಜಿಯನ್ನು ಬೀದಿಯಲ್ಲಿ ಬಿಡಲು ಕಾರಣ ಕೊಟ್ಟ ಮೊಮ್ಮಗ

Sampriya

ಗುರುವಾರ, 26 ಜೂನ್ 2025 (18:41 IST)
ಮುಂಬೈ: ಚರ್ಮದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಜ್ಜಿಯನ್ನು ಕಸದ ರಾಶಿ ಬಳಿ ಎಸೆದು ಹೋದ ಪ್ರಕರಣ ಸಂಬಂಧ ಮೊಮ್ಮಗ, ಆತನ ಸೋದರ ಮಾವ ಹಾಗೂ ಆಟೋರಿಕ್ಷಾ ಚಾಲಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಬಂಧಿತರನ್ನು ಆಕೆಯ ಮೊಮ್ಮಗ ರಾಹುಲ್ ಶೆವಾಲೆ, ಆತನ ಸೋದರ ಮಾವ ಬಾಬಾಸಾಹೇಬ್ ಗಾಯಕ್ವಾಡ್ ಮತ್ತು ಆಟೋರಿಕ್ಷಾ ಚಾಲಕ ಸಂಜಯ್ ಕದ್ರೇಸಿಂ ಎಂದು ಗುರುತಿಸಲಾಗಿದೆ.

ವಿಚಾರಣೆ ವೇಳೆ ಆಕೆಯ ಆರೈಕೆಯನ್ನು ಮಾಡಿ ಬೇಸತ್ತು ಹೋದೆ. ಹಾಗಾಗಿ ಆಕೆಯನ್ನು ಅಲ್ಲಿ ಬಿಟ್ಟುಬಂದೆ ಎಂದು ಹೇಳಿದ್ದಾರೆ.  

ಪ್ರಮುಖ ಆರೋಪಿ ರಾಹುಲ್ ಶೆವಾಲೆ ಎಂದು ಗುರುತಿಸಲಾಗಿದ್ದು, ಜೂನ್ 22 ರಂದು ಆರೆಯ ಅರಣ್ಯ ಪ್ರದೇಶದಲ್ಲಿ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಜ್ಜಿ ಯಶೋದಾ ಗಾಯಕ್‌ವಾಡ್ ಅವರನ್ನು ಕಸದ ರಾಶಿ ಬಳಿ ಮೊಮ್ಮಗ, ಆತನ ಸೋದರ ಮಾವ ಹಾಗೂ ಆಟೋ ರಿಕ್ಷಾ ಡ್ರೈವರ್ ಬಿಟ್ಟು ಹೋಗಿದ್ದರು. ಮಹಿಳೆ ಗಾಯಗೊಂಡು ಕಸದ ರಾಶಿಯಲ್ಲಿ ಬಿದ್ದಿರುವುದು ಕಂಡುಬಂದಿದೆ

ಅಲ್ಸರೇಟಿವ್ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿರುವ ವೃದ್ಧೆಯನ್ನು ಮೊದಲು ಜೋಗೇಶ್ವರಿ ಟ್ರಾಮಾ ಕೇರ್ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ನಂತರ ಕೂಪರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ