ಅರವಿಂದ್ ಕೇಜ್ರಿವಾಲ್ ಅವರ ಕೆಲವು ಸಹೋದ್ಯೋಗಿಗಳು ಜೈಲಿಗೆ ಹೋಗಿದ್ದನ್ನು, ಇನ್ನೂ ಕೆಲವರು ವಂಚನೆಯಲ್ಲಿ ತೊಡಗಿದ್ದನ್ನು ನೋಡಿ ತನಗೆ ತುಂಬಾ ವಿಷಾದವೆನಿಸುತ್ತದೆ ಎಂದು ಹೆಸರಾಂತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮಂಗಳವಾರ ತಿಳಿಸಿದ್ದು, ಹಜಾರೆ ಅವರ ಹೇಳಿಕೆಯಿಂದ ಕೇಜ್ರಿವಾಲ್ ಅವರನ್ನು ಮತ್ತಷ್ಟು ಮುಜುಗರಕ್ಕೀಡುಮಾಡಿದೆ.
ತಾವು ಮುಂಚೆ ಕೇಜ್ರಿವಾಲ್ ಅವರಿಗೆ, ನೀವು ಪಕ್ಷಕ್ಕೆ ಚಾಲನೆ ನೀಡಿದ ಬಳಿಕ ಜಗತ್ತನ್ನು ಸುತ್ತುತ್ತೀರಿ, ಪಕ್ಷಕ್ಕಾಗಿ ರಾಲಿಗಳನ್ನು ದೇಶದಲ್ಲಿ ಆಯೋಜಿಸುತ್ತೀರಿ, ಆದರೆ ನಿಮ್ಮ ಪಕ್ಷವನ್ನು ಸೇರಿದ ಜನರಲ್ಲಿ ಉತ್ತಮ ಗುಣನಡತೆ ಇದೆಯೋ ಇಲ್ಲವೋ ಎಂದು ಹೇಗೆ ಪತ್ತೆಹಚ್ಚುತ್ತೀರಿ ಎಂದು ಕೇಳಿದ್ದಾಗಿ ಹೇಳಿದರು.